ಶಿವಾಜಿ ಮಹಾರಾಜರ ಕುರಿತ ನಿಂದನೆ; ಬಾಲಕ ಪೊಲೀಸ್ ವಶಕ್ಕೆ

ಕಾನೂನು ಸಂಘರ್ಷಕ್ಕೊಳಗಾದ ಬಾಲಕ ವಾಟ್ಸಾಪ್ ನಲ್ಲಿ ಹರಿಬಿಟ್ಟ ಶಿವಾಜಿ ಮಹಾರಾಜರ ಕುರಿತ ನಿಂದನೆಯ ಘಟನೆ ವಿಜಯಪುರದ ಚಡಚಣ ಪಟ್ಟದಿಂದ
ವರದಿಯಾಗಿದೆ.

ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಹೋರಾಟಕ್ಕೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೋಮವಾರ ರಾತ್ರಿ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಅಶ್ಲೀಲ ಪದ ಬಳಸಿ ನಿಂದನೆ
ಮಾಡಿದ್ದ. ಸದರಿ ವಿಡಿಯೋ ಬೆಳಕು ಹರಿಯುವ ವೇಳೆಗೆ ವೈರಲ್ ಅಗಿದ್ದು, ವಿಷಯ ತಿಳಿದು ಕುಪಿತರಾದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಚಡಚಣ
ಪಟ್ಟಣದಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಇದರ ಬೆನಲ್ಲೇ ಪರಿಸ್ಥಿತಿ ಬಿಗಡಾಯಿಸುವುದನ್ನು ತಡೆಲು ಮುಂದಾಗಿರುವ ಚಡಚಣ ಪೊಲೀಸರು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು
ವಿಚಾರಣೆ ನಡೆಸಿದ್ದಾರೆ.

 
 
 
 
 
 
 
 
 
 
 

Leave a Reply