ಶಾಸಕ ಹರೀಶ್ ಪೂಂಜಾರವರ ಮೇಲೆ ತಲ್ವಾರ್ ದಾಳಿಗೆ ಯತ್ನ!

ಮಂಗಳೂರು: ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್
ಪೂಂಜಾ ರಾತ್ರಿ ಹೊತ್ತು ಮಂಗಳೂರಿನಿಂದ ಬೆಳ್ತಂಗಡಿಗೆ
ಪ್ರಯಾಣಿಸುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಅವರಿಗೆ
ತಲ್ವಾರ್ ತೋರಿಸಿ ಬೆದರಿಸಲು ಪ್ರಯತ್ನಿಸಿದ್ದಾನೆ.
ಮಂಗಳೂರಿನ ಫರಂಗಿಪೇಟೆ ಎಂಬಲ್ಲಿ ಮಧ್ಯ ರಾತ್ರಿ 1.50ರಹೊತ್ತಿಗೆ ಈ ಘಟನೆ ನಡೆದಿದೆ.

ಪಡೀಲ್ ನಿಂದ ಹಿಂಬಾಲಿಸಿ ಬಂದ ಕಾರಿನಲ್ಲಿ ಇದ್ದ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ.
ಆರೋಪಿ ಬಳಿ ಹ್ಯಾಮರ್ ಇತ್ತು ಎಂದು ಶಾಸಕ ಹರೀಶ್
ಪೂಂಜಾ ಪೊಲೀಸರಿಗೆ ದೂರು ನೀಡಿದ್ದಾರೆ.
ಶಾಸಕರ ಮೇಲೆ ಹಲ್ಲೆ ನಡೆಸಲು ದುಷ್ಕರ್ಮಿ ಸಂಚು ಹೂಡಿದ್ದ ಎಂದು ಹೇಳಲಾಗುತ್ತಿದೆ.

ಇದೀಗ ಶಾಸಕ ಹರೀಶ್ ಪೂಂಜಾ ಅವರ ಭದ್ರತೆ
ಬಿಗಿಗೊಳಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶ
ನೀಡಿದ್ದಾರೆ.

 
 
 
 
 
 
 
 
 
 
 

Leave a Reply