ಉಡುಪಿ: ಹಾಡುಹಗಲೇ ಕೆನರಾ ಬ್ಯಾಂಕಿನಲ್ಲಿದ್ದ ಗ್ರಾಹಕನ 1.90 ಲಕ್ಷ ರೂ. ಲೂಟಿಮಾಡಿ ಪರಾರಿ

ಉಡುಪಿ: ಉಡುಪಿಯ ಕೋರ್ಟ್ ರೋಡ್‍ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರೊಬ್ಬರ ಕೈಯಲ್ಲಿದ್ದ 1.90 ಲಕ್ಷ ರೂ.ವನ್ನು ಹಾಡುಹಗಲೇ ಕಳ್ಳನೋರ್ವ ದೋಚಿರುವ ಘಟನೆ ಇಂದು ವರದಿಯಾಗಿದೆ.
ನಗರದ ವಾದಿರಾಜ ಕಟ್ಟದಲ್ಲಿ ಶೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದ ಅಶೋಕ್ ಕುಮಾರ್ ಬ್ಯಾಂಕಿಗೆ ಹಣ ಜಮೆ ಮಾಡಲು ಬಂದಿದ್ದ ವೇಳೆ ಮಧ್ಯಾಹ್ನ 12.30 ರ ಸುಮಾರಿಗೆ ಬಂದವ 1.90 ಲಕ್ಷ ರೂ. ದೋಚಿ ಪರಾರಿಯಾಗಿದ್ದಾನೆ.

ಬೂದು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ 5 ರಿಂದ 6 ಮಂದಿ ತಂಡದಿಂದ ಈ ಕೃತ್ಯ ನಡೆದಿದೆ. ಇವರು ಅಶೋಕ್ ಕುಮಾರ್ ರವರನ್ನು ಹಿಂಬಾಲಿಸಿ ಕೊಂಡು ಬಂದಿದ್ದರು ಎನ್ನಲಾಗುತ್ತಿದ್ದು, ಪರಿಚಯದವರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
 
 
 
 
 
 
 
 
 
 

Leave a Reply