ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಮಾವಿನಕಟ್ಟೆ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭ ಯುವಕನೋರ್ವ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆ. 4ರಂದು ಸಂಜೆ ವೇಳೆ ಸಂಭವಿಸಿದೆ.
ಹಾಳೆಕಟ್ಟೆಯ ನಿವಾಸಿ,ಬೆಂಗಳೂರಿನ ಸಿಮನ್ಸ್ ಇಂಡಿಯಾ ಕಂಪೆನಿ ಉದ್ಯೋಗಿ ಸುಕೇಶ್ ಶೆಟ್ಟಿ (27) ಎಂಬವರು ಮೃತಪಟ್ಟ ದುರ್ದೈವಿ. ಬೌಲಿಂಗ್ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದ ಸುಕೇಶ್ ಅವರು ಹೃದಯ ಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ,ತಾಯಿ,ಮೂವರು ಸಹೋದರ ರನ್ನು ಅಗಲಿದ್ದಾರೆ.