ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಸೌರಮಾನ ಯುಗಾದಿ ಸಂಭ್ರಮಾಚರಣೆಯು 16.4.2023 ಭಾನುವಾರದಂದು ಸಂಜೆ 4:30 ಗಂಟೆಯಿಂದ ಗುಂಡಿಬೈಲಿನ ಬ್ರಾಹ್ಮೀ ಸಭಾಭವನದಲ್ಲಿ ನಡೆಯಲಿದೆ.
ಮೊದಲಿಗೆ ಪರಿಷತ್ತಿನ ಮಹಿಳಾ ಸದಸ್ಯರಿಂದ ಭಕ್ತಿಪೂರ್ವಕ ಭಜನೆ ತದನಂತರ ಜ್ಯೋತಿಷ್ಯ ವಿದ್ವಾನ್ ಹೆರ್ಗ ರವೀಂದ್ರ ಭಟ್ ಇವರಿಂದ ಶೋಭಕ್ರತ್ ನಾಮ ಸಂವತ್ಸರದ ಪಂಚಾಂಗ ಶ್ರವಣ, ಮತ್ತು ಯುಗಾದಿಯ ಮಹತ್ವದ ಬಗ್ಗೆ ವಿಶೇಷ ಧಾರ್ಮಿಕ ಪ್ರವಚನ ನಡೆಯಲಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚೈತನ್ಯ ಎಂ.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.