ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ಉಚಿತ ಮಾರ್ಗಫಲಕ ಅಳವಡಿಕೆ

ಕಟಪಾಡಿಯ ಅಗ್ರಹಾರ ಏಣಗುಡ್ಡೆ ಇಲ್ಲಿ “ಕಾರುಣ್ಯ” ವೆಂಬ ವೃದ್ಧರ ಆಶ್ರಮ/ಅನಾಥರ ಆಶ್ರಮವಿದ್ದು ಇದನ್ನು ಶ್ರೀಯುತ ಕುಮಾರ್ ದಂಪತಿಗಳು ಸೇವಾರೂಪದಲ್ಲಿ ಕಳೆದ ಎಂಟು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಹದಿಮೂರು ಜನರಿಗೆ ಉಚಿತವಾಗಿ ವಸತಿ ಕಲ್ಪಿಸಲಾಗಿದ್ದು ನಿರ್ಗತಿಕ ವೃದ್ಧರು ಆಶ್ರಯಪಡೆದಿದ್ದಾರೆ. ಇಂದು ಸ್ವಂತಮಕ್ಕಳೇ ವೃದ್ಧತಂದೆತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ದಿನಗಳಲ್ಲಿ ಸ್ವಂತಕರ್ಚಿನಲ್ಲಿ ಇಂತಹ ಸಮಾಜಸೇವೆಯನ್ನು ಸಲ್ಲಿಸುತ್ತಿರುವ ಕುಮಾರ್ ದಂಪತಿಗಳ ಕಾರ್ಯ ಅಭಿನಂದನಾರ್ಹವಾಗಿದೆ. ಕಾರುಣ್ಯ ಆಶ್ರಮವು ಕಟಪಾಡಿ ಪೇಟೆಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಇದ್ದು ಜನರಿಗೆ ಈ ಆಶ್ರಮಕ್ಕೆ ಹೋಗಲು ಮಾರ್ಗ ತಿಳಿಯುವುದು ಕಷ್ಟವಾಗಿದೆ. ಇದನ್ನು ಗಮನಿಸಿ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯು ಈ ಆಶ್ರಮಕ್ಕೆ ನಾಲ್ಕುಕಡೆಗಳಲ್ಲಿ ಮಾರ್ಗಫಲಕವನ್ನು ಸೇವಾರೂಪಾದಲ್ಲಿ ಉಚಿತವಾಗಿ ಹಾಕಿಕೊಡುತ್ತಿದೆ. ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಈ ಸೇವಾಕಾರ್ಯವನ್ನು ಕಟಪಾಡಿಯ ನಾಗರಿಕರು ಪ್ರಶಂಸಿಸಿದ್ದಾರೆ.

ಈ ಸಂದರ್ಬದಲ್ಲಿ ವಿನಾಯಕ್ ರಾವ್ ಅಧ್ಯಕ್ಷರು ಸೇವಾಧಾಮ ಕನ್ಯಾಡಿ, ಚಂದ್ರಚಿತ್ರ ಕಡೇಕಾರ್, ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply