ಶ್ರೀ ವಾಸುಕಿ ನಾಗ ದೇವರ ಸನ್ನಿಧಾನ: ನಾಗ ದೇವರಿಗೆ ರಜತ ಕವಚ ಸಮರ್ಪಣೆ

ಉಡುಪಿ ಶ್ರೀ ವಾಸುಕಿ ನಾಗ ದೇವರ ಸನ್ನಿಧಾನ ಕೃಷ್ಣ ಕೃಪಾ ಕಟ್ಟಡದ ವರ್ತಕರ ಸಂಘ ವತಿಯಿಂದ 5 ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ನಾಗ ದೇವರಿಗೆ ರಜತ ಕವಚ ಸಮರ್ಪಣೆ ಶನಿವಾರ ನಡೆಯಿತು.

ಧಾರ್ಮಿಕ ಪೂಜಾ ಕಾರ್ಯಕ್ರಮ ಗಳನ್ನು ವೇದಮೂರ್ತಿ ಕೃಷ್ಣ ಮೂರ್ತಿ ಭಟ್ ನಡೆಸಿಕೊಟ್ಟರು.  ನಾಗ ದೇವರಿಗೆ ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ ಪೂಜೆ, ದರ್ಶನ ಸೇವೆಯನ್ನು ರಮಾನಂದ ಭಟ್ ನಡೆಸಿಕೊಟ್ಟರು. ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ವರ್ತಕರ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ , ಗಣೇಶ್ ಶೆಟ್ಟಿಗಾರ್, ಯಶೋಧರ , ವಾಗೇಶ್ ಭಟ್ , ಪ್ರಭಾಕರ್ ಪೂಜಾರಿ , ಪುರೋಹಿತ್ , ನೂರಾರು ವರ್ತಕರು , ಸಂಘದ ಸದಸ್ಯರು ಉಪಸ್ಥರಿದ್ದರು.

 

 
 
 
 
 
 
 
 
 
 
 

Leave a Reply