ಯುಪಿಎಂಸಿ- ಮತದಾನ ಪ್ರತಿಜ್ಞೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾರರ ಜಾಗೃತಿ ಮತ್ತು ಪ್ರತಿಜ್ಞೆಯ ಕಾರ್ಯಕ್ರಮವು ದಿನಾಂಕ 28ನೇ ಮಾರ್ಚ್ ನಂದು ಕಾಲೇಜಿನ ಮುಂಭಾಗದಲ್ಲಿ ಜರಗಿತು.

ಪೌರಾಯುಕ್ತರಾದ ಶ್ರೀ ರಾಯಪ್ಪ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ಮತ್ತು ಮತದಾನದ ಕುರಿತು ವಿವರಿಸಿದರು, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಪ್ರತಿಜ್ಞಾ ವಿಧಿ ಬೋಧಿಸಿದರು, ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ, ಪರಿಸರ ಇಲಾಖೆಯ ಅಭಿಯಂತರರಾದ ಸ್ನೇಹ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದ ಮತ್ತು ಯುಪಿಎಂಸಿ ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply