ಇತ್ತೀಚೆಗೆ ರಾಜ್ಯ ಹಾಗೂ ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಯಲ್ಲಿ SDPI ಸಂಘಟನೆಯು ನೇರವಾಗಿ ಭಾಗಿಯಾಗಿರುವುದು ಹಾಗೂ ಇತ್ತೀಚೆಗೆ ಬಿಹಾರದಲ್ಲಿ ಬಂಧನಕ್ಕೋಳಗಾದ ಆರೋಪಿಗಳ ಮಾಹಿತಿ ಅನುಸಾರ ಪ್ರಧಾನಿ ಮೋದೀಜಿಯವರನ್ನು ಹತ್ಯೆ ಮಾಡಲು ಸಂಚು ಮಾಡಿರುವುದು ಅತ್ಯಂತ ಖೇದಕರವಾಗಿದೆ. ಈಗಾಗಲೇ ಈ ಮತೀಯ ಸಂಘಟನೆಯನ್ನು ನಿಷೇದಿಸುವಂತೆ ಕೇರಳ ರಾಜ್ಯದ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಿರುವುದು ಪ್ರಸ್ತುತ ಈ ಸಂಘಟನೆಯ ನಿಜಾಂಶವನ್ನು ಬಯಲು ಮಾಡಿದೆ.
ಕರ್ನಾಟಕ ರಾಜ್ಯದಲ್ಲೂ ಈ ಸಂಘಟನೆಯು ವಿವಿದ ಕಾನೂನು ಬಾಹಿರ ಕ್ರತ್ಯಗಳಲ್ಲಿ ಭಾಗವಹಿಸುತ್ತಿರುವುದು ಮೆಲ್ನೋಟಕ್ಕೆ ಸತ್ಯವಾಗಿದೆ. ಹಾಗಾಗಿ ಈ ಸಂಘಟನೆಯನ್ನು ನಿಷೇದಿಸುವಂತೆ ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಉಡುಪಿ ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಗಳನ್ನು ಮನವಿ ಮೂಲಕ ಆಗ್ರಹಿಸಿದೆ.
ಈ ಸಂಧರ್ಭದಲ್ಲಿ ಮಂಗಳೂರು ವಿಭಾಗಾಧ್ಯಕ್ಷರಾದ ಮೋಹನ್ ಭಟ್, ಉಡುಪಿ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು, ಜಿಲ್ಲಾ ಮುಖಂಡರಾದ ಶರತ್ ಮಣಿಪಾಲ, ನಿತೇಶ್, ಸುದೀಪ್ ನಿಟ್ಟೂರು, ಸುಜಿತ್ ನಿಟ್ಟೂರು,ಜೀವನ್ ಪೂಜಾರಿ, ರಾಜೇಶ್ ನಿಟ್ಟೂರ್, ಅಜಿತ್ ರಾವ್, ಶ್ರೀನಿವಾಸ್ ಭಟ್, ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.