ಪುತ್ತಿಗೆ ಶ್ರೀ‌ಗಳ ಜೀವನ‌ ಚಿತ್ರ ಕಲಾ ಪ್ರದಶ೯ನ

ಉಡುಪಿ : ಸನ್ಯಾಸದಿಂದ ಪರ್ಯಾಯ ಪೂರ್ವಭಾವಿ ಸಂಚಾರ ತನಕ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರ ಜೀವನ ಚಿತ್ರಕ್ಕೆ ಕಲಾವಿದ ಲಿಯಾಕತ್ ಅಲಿ ಕಲಾ‌ ಸ್ಪರ್ಶದ ಚಿತ್ತಾರ ಮೂಡಿಸಿದ್ದಾರೆ. 

ಕುಂಜಿಬೆಟ್ಟಿನ ಕಟ್ಟೆ ಆಚಾರ್ಯ ಮಾರ್ಗದ ಇನಾಯತ್ ಆಟ್೯ ಗ್ಯಾಲರಿಯಲ್ಲಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರ ಜೀವನ ಚಿತ್ರ‌ಪ್ರದರ್ಶನ ಜ.18 ರ ತನಕ ನಡೆಯಲಿದ್ದು‌ ಶ್ರೀಪಾದರು ಮಂಗಳವಾರ ಈ ಕಲಾ ಪ್ರದಶ೯ನವನ್ನು ಉದ್ಘಾಟಿಸಿದರು.

 ಈ ಸಂದಭ೯ದಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ಕಲಾ ವಿದ್ಯಾರ್ಥಿನಿ ರಚಿಸಿದ ರಾಧಾಕೃಷ್ಣರ ಚಿತ್ರವನ್ನು ಅರ್ಪಿಸಲಾಯಿತು. ಕಲಾವಿದ ಲಿಯಾಕತ್ ಅಲಿಯವರಿಗೆ ಶ್ರೀಗಳು ಕೋಟಿ ಗೀತಾ ಲೇಖನ ಯಜ್ಞದ ಪುಸ್ತಕ ನೀಡಿದರು. ಕಾಯ೯ಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಭಾಗವಹಿಸಿ ಶುಭ ಹಾರೈಸಿದರು.ಈ ಸಂದಭ೯ದಲ್ಲಿ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು, ಕವಾ೯ಲು ರವರನ್ನು ಸನ್ಮಾನಿಸಲಾಯಿತು. ಶಶಿಧರ ಶೆಟ್ಟಿ ಸ್ವಾಗತಿಸಿದರು.ಈ ಪ್ರದಶ೯ನ ಜ.18 ರವರೆಗೆ ನಡೆಯಲಿದೆ.

 
 
 
 
 
 
 
 
 
 
 

Leave a Reply