ಇಂದ್ರಾಳಿ : ಮುದ್ದುರಾಧಾ-ಮುದ್ದುಕೃಷ್ಣ ಛದ್ಮವೇಷ ಸ್ಪರ್ಧೆ

ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಇಂರ‍್ಯಾಕ್ಟ್ ಕ್ಲಬ್‌ನ ಆಶ್ರಯದಲ್ಲಿ ಮತ್ತು ರೋಟರಿ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುರಾಧಾ-ಮುದ್ದುಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸುಮಾರು ಅರುವತ್ತು ಪುಟಾಣಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶಾಲಾ ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈಯವರು ಅಧ್ಯಕ್ಷತೆ ವಹಿಸಿದರು..ಉಡುಪಿ ರೋಟರಿ ಅಧ್ಯಕ್ಷರಾದ ರೊ.ಸುಬ್ರಹ್ಮಣ್ಯ ಕಾರಂತ್ ಮುಖ್ಯ ಆತಿಥಿಯಾಗಿದ್ದರು.
ಆಡಳಿತ ಮಂಡಳಿಯ ಸದಸ್ಯ ಶ್ರೀ ಕೆ ರತ್ನಾಕರ ಶೆಣೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ,ಉಪಾಧ್ಯಕ್ಷ ಅಶೋಕ್ ನಾಯಕ್, ರೋಟರಿಯ ಚರ‍್ಮಾನ್ ಶ್ರೀಮತಿ ಪದ್ಮನಿ ಭಟ್, ರೋಟರಿ ಕಾರ್ಯದರ್ಶಿ ರೊ. ಗುರುರಾಜ್ ಭಟ್, ಉಡುಪಿ ರೋಟರಿಯ ಸದಸ್ಯರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಶ್ಮಾ, ಇಂರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಕು| ನಮನ್ ಕಾರಂತ್, ಇಂರ‍್ಯಾಕ್ಟ್ ಕ್ಲಬ್‌ನ ಶಾಲಾ ಸಂಯೋಜಕಿ ಶ್ರೀಮತಿ ಮಾಧವಿ ಉಪಸ್ಥಿತರಿದ್ದರು. ಕು| ನಮನ್ ಕಾರಂತ್ ಸ್ವಾಗತಿಸಿ, ಕು| ಸಾಕ್ಷಿ ವಂದಿಸಿದರು. ಕು| ಧರಿತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply