ಉಡುಪಿ ಜಿಲ್ಲೆಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಸದಸ್ಯರನ್ನ ನೀಡಬೇಕು- ಪವನ್ ಕುಮಾರ್ ಶಿರ್ವ

ಈಗಾಗಲೇ ಕರ್ನಾಟಕದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ನಿಯಮಿತವಿದ್ದು ಅದರಲ್ಲಿ ಕೆಲವು ಸದಸ್ಯರಿದ್ದು ಕೆಲವು ಸದಸ್ಯರ ಆಯ್ಕೆ ಖಾಲಿ ಇದೆ ಹಾಗೂ ಅಧ್ಯಕ್ಷರ ಆಯ್ಕೆ ಕೂಡ ಆಗಿಲ್ಲ. ಆದ ಕಾರಣ ಇಲ್ಲಿಯ ಜನರಿಗೆ ಯಾವುದೇ ಸವಲತ್ತುಗಳನ್ನು ತೆಗೆದುಕೊಳ್ಳಬೇಕಾದರೆ ಸರಿಯಾದ ಮಾಹಿತಿ ಸಿಗುವುದಿಲ್ಲ.

ಯಾವುದಾದರೂ ಸವಲತ್ತುಗಳನ್ನು ಪಡೆಯಲು ಹೋದರೆ ಇರುವುದಿಲ್ಲ. ಸವಲತ್ತುಗಳು ಇದ್ದರೂ ತಾಲೂಕಿನಲ್ಲಿ ಕೇವಲ ಒಂದು ವ್ಯಕ್ತಿಗೆ ನೀಡುವುದು. ಇದೆಲ್ಲ ಸರಿಯಲ್ಲ ಯಾಕೆಂದರೆ ತಾಲೂಕಿನಲ್ಲಿ ತುಂಬಾ ಜನರಿರುವಾಗ ಒಬ್ಬರನ್ನು ಆಯ್ಕೆ ಮಾಡಿ, ಅಯ್ಕೆ ಆದವರಿಗೂ ಸರಿಯಾದ ಸವಲತ್ತು ನೀಡುವುದಿಲ್ಲ. ಈ ಕಾರಣಕ್ಕಾಗಿ ಸರ್ಕಾರ ಉಡುಪಿ ಜಿಲ್ಲೆಯ ಭೋವಿ ಅಭಿವೃದ್ಧಿ ನಿಗಮಕ್ಕೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ಪವನ್ ಕುಮಾರ್ ಶಿರ್ವ ವಿನಂತಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply