ಅಂಚೆ ಇಲಾಖೆ ಏರ್ಪಡಿಸಿದ್ದ ಆನ್‌ಲೈನ್ ಪತ್ರ ಲೇಖನ ಹಾಗೂ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ: ಮಕ್ಕಳಲ್ಲಿ ಒತ್ತಡ ಮತ್ತು ಏಕತಾನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆಯು
ಏರ್ಪಡಿಸಿದ್ದ ಆನ್‌ಲೈನ್ ಪತ್ರ ಲೇಖನ ಹಾಗೂ ಚಿತ್ರಕಲಾ ಸ್ಪರ್ಧಾ ವಿಜೇತರಿಗಾಗಿ ಬಹುಮಾನ ವಿತರಣಾ ಸಮಾರಂಭ ಉಡುಪಿ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಉಡುಪಿ ಅಂಚೆ ಅಧೀಕ್ಷಕ ನವೀನ್ ಚಂದರ್ ಬಹುಮಾನ ವಿತರಿಸಿದರು.

ಪತ್ರ ಲೇಖನ ಸ್ಪರ್ದೆಯಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಕು| ಮಾನ್ಯ (ಪ್ರಥಮ), ಮಾ| ಗಗನ್‌ರಾಜ್ (ತೃತೀಯ), ವಳಕಾಡು ಸಂಯುಕ್ತ ಶಾಲೆಯ ಮಾ| ಹರ್ಷಿತ್ ಆಚಾರ್ಯ (ದ್ವಿತೀಯ) , ಚಿತ್ರಕಲಾ ಸ್ಪರ್ಧೆಯಲ್ಲಿ ವಳಕಾಡು ಸಂಯುಕ್ತ ಶಾಲೆಯ ಮಾ| ಕೇದಾರ ನಾಯಕ್ (ಪ್ರಥಮ), ಕು| ಭಾರ್ಗವಿ ಬಿ ಎಂ (ದ್ವಿತೀಯ) ಇಂದ್ರಾಳಿಯ ಶಾಲೆಯ ಕು|ಪಂಚಮಿ ಜಿ. ಎಸ್ (ತೃತೀಯ) ಸ್ಥಾನ ಗಳಿಸಿದರು. ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಅಂಚೆ ಚೀಟಿ ಸಂಗ್ರಹ-ಫಿಲಾಟೆಲಿ ಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.

ಅಂಚೆ ಮಾರ್ಕೆಟಿಂಗ್ ಎಕ್ಸ್ಕ್ಯೂಟಿವ್ ಪೂರ್ಣಿಮಾ ಜನಾರ್ಧನ್ ಸ್ವಾಗತಿಸಿ ನಿರೂಪಿಸಿದರು. ಸಹಾಯಕ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ವಂದಿಸಿದರು.  ಅಂಚೆ ವ್ಯಾಪಾರ ಅಭಿವೃದ್ಧಿ ವಿಭಾಗದ ಲೀಲಾವತಿ ತಂತ್ರಿಯವರು ಮತ್ತು ಅಂಚೆ ಸಿಬ್ಬಂದಿ ನಿತೇಶ್ ಕಾರ್ಯಕ್ರಮ ಸಂಯೋಜಿಸಿದ್ದರು.

 
 
 
 
 
 
 
 
 
 
 

Leave a Reply