ಪಡುಕರೆ : ಕ್ರೀಡಾ ಮೈದಾನ ಉದ್ಘಾಟನೆ

ಮಲ್ಪೆ ಪಡುಕರೆ ಭಾಗದ ಯುವಕರ ಬಹು ವರ್ಷಗಳ ಬೇಡಿಕೆಯಾಗಿದ್ದ ಪಡುಕರೆ ಭಾಗದಲ್ಲಿ ವ್ಯವಸ್ಥಿತ ಕ್ರೀಡಾ ಮೈದಾನ ನಿರ್ಮಿಸುವಂತೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯರ ಮನವಿಯಂತೆ ಶಾಂತಿ ನಗರದಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕ್ರೀಡಾ ಮೈದಾನವನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಕ್ರೀಡಾ ಪ್ರತಿಭೆಗಳ ಚಟುವಟಿಕೆಗೆ ಮೈದಾನ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀಮತಿ ಎಡ್ಲಿನ್ ಕರ್ಕಡ, ಗಣ್ಯರಾದ ಶ್ರೀ ನಾಗರಾಜ್ ಸುವರ್ಣ, ಶ್ರೀ ವಿನಯ ಕರ್ಕೇರ, ಶ್ರೀ ಸುಧಾಕರ ಕುಂದರ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಸಂತ, ಪ್ರವೀಣ್ ಮೆಂಡನ್, ಪ್ರಮೋದ್ ಸಾಲ್ಯಾನ್, ವೇದಾವತಿ, ಮಾಜಿ ನಗರಸಭಾ ಸದಸ್ಯರಾದ ಶ್ರೀ ವಿಜಯ ಕುಂದರ್, ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಅಶೋಕ್, ಪ್ರಮುಖರಾದ ಶ್ರೀ ಭುವನ್ ಪಡುಕರೆ ಹಾಗೂ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply