ಸುನಾಗ್ ನವ್ಯಹಿತ ಬೇಸಿಗೆ ಶಿಬಿರ-2024

ಮಣಿಪಾಲ: ಸುನಾಗ್ ಆಸ್ಪತ್ರೆ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ  ಸಹಕಾರದಲ್ಲಿ ಸುನಾಗ್ ನವ್ಯಹಿತ ಬೇಸಿಗೆ ಶಿಬಿರ-2024 ನ್ನು ಏಪ್ರಿಲ್ 11 ರಿಂದ 15 ರವರೆಗೆ ಬೆಳಗ್ಗೆ 8.30 ರಿಂದ ರಾತ್ರಿ 9  ರ ತನಕ ಸುನಾಗ್ ಆಸ್ಪತ್ರೆಯ ಹತ್ತಿರ ಇರುವ ಐಡನ್ ಇನ್ ಹೋಮ್ ಸ್ಟೇ ಯಲ್ಲಿ ಆಯೋಜಿಸಲಾಗುವುದು.

ಕಾರ್ಯಕ್ರಮವನ್ನುಅಂತಾರಾಷ್ಟ್ರೀಯ ಜಾದೂಗಾರ ಪ್ರೊ.ಶಂಕರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಲಿದ್ದಾರೆ,  ಮುಖ್ಯ ಅತಿಥಿಯಾಗಿ ಜಾದೂಗಾರ ಜೂನಿಯರ್ ಶಂಕರ್, ಪರಿಸರ ತಜ್ಞ ತೇಜಸ್ವಿ ಆಚಾರ್ಯ ಭಾಗವಹಿಸಲಿದ್ದಾರೆ.

ಏ.15 ರಂದು ಸಮಾರೋಪ ಸಮಾರಂಭ: ಏ.15 ರಂದು ಸಂಜೆ 3 ರಿಂದ 5 ರವರೆಗೆ ಸಮಾರೋಪ ಕಾರ್ಯಕ್ರಮಗಳು ಜರುಗಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ  ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಜನಾರ್ದನ್ಕೊ ಡವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಿಬಿರದ ನಿರ್ದೇಶಕರಾದ ಡಾ. ನರೇಂದ್ರ ಕುಮಾರ್ ಎಚ್.ಎಸ್ ಹಾಗೂ ಡಾ. ವೀಣಾ ನರೇಂದ್ರ ಎಚ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply