ಉಡುಪಿ : ನಗರದ ಸರ್ವಿಸ್ ಬಸ್ ನಿಲ್ದಾಣದ ಸನಿಹದಲ್ಲಿರುವ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಬಳಿಯ ಕೃಷ್ಣಾ ಕೃಪಾ ಕಟ್ಟಡದ ಆವರಣದಲ್ಲಿರುವ ಶ್ರೀ ವಾಸುಕಿ ನಾಗ ದೇವರ ಸನ್ನಿಧಿಯ ಮೇಲೆ ಇಂದಿನ ಭಾರೀ ಗಾಳಿ ಮಳೆಗೆ ಮರ ಬಿದ್ದ ಘಟನೆ ಸಂಭವಿಸಿದೆ. ಮರ ಬಿದ್ದ ಪರಿಣಾಮ ಅಂದಾಜು ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಉಂಟಾಗಿರ ಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಇಂದು ಗಾಳಿಯ ತೀವ್ರತೆಯು ಹೆಚ್ಚಾಗಿತ್ತು. ಹಲವೆಡೆ ಗಾಳಿಯಿಂದ ಕೂಡಿದ ಭಾರೀ ಮಳೆಯಾಗಿದೆ. ನಾಲ್ಕು ದಿನಗಳ ಕಾಲ ಮುಂಗಾರು ಚುರುಕಾಗಲಿದ್ದು ಕರಾವಳಿಯಲ್ಲಿ ಭಾರೀ ಗಾಳಿ ಮಳೆಯು ಸುರಿಯಲಿದೆ.