ಕಾರ್ಕಳ : ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಅರ್ಥಪೂರ್ಣ ಗಾಂಧೀ ಜಯಂತಿ

ಕಾರ್ಕಳ : ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾರ್ಕಳದ ಸುರಕ್ಷಾ ಸೇವಾಶ್ರಮದ ಪರಿಸರದಲ್ಲಿ ಗಾಂಧೀ ಜಯಂತಿ ಅಂಗವಾಗಿ ಪರಿಸರ ಸ್ವಚ್ಚತೆಯ ಕಾರ್ಯಕ್ರಮ ನಡೆಸಿದರು.

ಸೇವಾಶ್ರಮದ ವಾಸಿಗಳಿಗೆ ಮನರಂಜನೆ ಮತ್ತು ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅದೇ ರೀತಿ ಆಶ್ರಮದ ವಾಸಿಗಳಿಗೆ ಹಣ್ಣು ಹಂಪಲು ಮತ್ತು ಸಿಹಿ ತಿಂಡಿ ವಿತರಿಸಿದರು. ಆಶ್ರಮದ ಮುಖ್ಯಸ್ಥೆ ಆಯೇಶ ಬೇಗಂ ಸ್ವಾಗತಿಸಿದರು. ಶಾಲಾ ಗೈಡ್ ಶಿಕ್ಷಕಿಯರಾದ ಸೀಮಾ ಕಾಮತ್ ಮತ್ತು ಸುಜಾತಾ ಹೆಗ್ಡೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

 
 
 
 
 
 
 
 
 
 
 

Leave a Reply