ಇನಾಯತ್ ಆರ್ಟ್ ಗ್ಯಾಲರಿ ಉಡುಪಿಯ ರಜತ ಮಹೋತ್ಸವ ಸಮಾರಂಭ

ಉಡುಪಿ :- ಇನಾಯತ್ ಆರ್ಟ್ ಗ್ಯಾಲರಿ ಉಡುಪಿಯ ರಜತ ಮಹೋತ್ಸವ ಸಮಾರಂಭ ಹಾಗೂ ನವೀಕೃತ ಗ್ಯಾಲರಿ ಉದ್ಘಾಟನಾ ಸಮಾರಂಭ ಅ .2ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿ ಮಾತನಾಡಿ, 25 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಈ ಗ್ಯಾಲರಿ ಇನ್ನು ಉತ್ತಮವಾಗಿ ಬೆಳೆಯಲಿ ಕಲಾವಿದರಿಗೆ ತನ್ನ ಕಲಾಕೃತಿಯ ಮೂಲಕ ಹೆಸರು ಪಡೆಯಲು ಸಾಧ್ಯ.ಈ ಆರ್ಟ್ ಗ್ಯಾಲರಿ ಉಡುಪಿಯ ಘನತೆಗೆ ಕಲಶವಿಟ್ಟಂತೆ ಎಂದರು.

ಮುಖ್ಯ ಅತಿಥಿ ಕೆ.ಎಂ.ಸಿ ಯ ಮೂಳೆ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕಿರಣ್ ಆಚಾರ್ಯ ಶುಭ ಹಾರೈಸಿದರು.ಹಿರಿಯ ಕಲಾವಿದ ರಮೇಶ್ ರಾವ್ ಲಲಿತಾ ಕಲಾ ಅಕಾಡೆಮಿಯಲ್ಲಿ ಸದಸ್ಯರಾಗಿ ಉಡುಪಿ ಕಲಾವಿದರಿಗೂ ಅವಕಾಶ ನೀಡಬೇಕೆಂದರು.

ವೇದಿಕೆಯಲ್ಲಿ ಗ್ಯಾಲರಿಯ ಮುಖ್ಯಸ್ಥ ಲಿಯಾಖತ್ ಆಲಿ, ಕರಾಮತ್ ಆಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಲಾ ಪ್ರದರ್ಶನ ನಡೆಯಿತು. ಸುಮಾರು 40 ಕಲಾವಿದರಿಗೆ ಕ್ಯಾನ್ ವಾಸ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ರಾಘವೇಂದ್ರ ಪ್ರಭು,ಕರ್ವಾಲು ನಿರೂಪಿಸಿ, ಸಕು ಪಾಂಗಾಳ ವಂದಿಸಿದರು.

 
 
 
 
 
 
 
 
 
 
 

Leave a Reply