ಕೊಡವೂರಿನಲ್ಲಿ ವಿಶಿಷ್ಟವಾಗಿ ನಡೆಯಿತು ಗಣರಾಜ್ಯೋತ್ಸವ ಆಚರಣೆ

ಉಡುಪಿ: ಗಣರಾಜ್ಯೋತ್ಸವ ಅಂದರೇ ಧ್ವಜಾರೋಹಣ ಮಾತ್ರವಲ್ಲ ಎನ್ನವಂತಿದೆ ಕೊಡವೂರಿನಲ್ಲಿ ನಡೆದ ಈ ಕೆಲಸ .ಇಲ್ಲಿ  ಪರಿಶಿಷ್ಟ ಜಾತಿಯ ಕಡುಬಡವರ ವಸತಿ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ಮೂಲಕ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಅಗತ್ಯವಿರುವವರಿಗೆ ಕೊಡವೂರಿನಲ್ಲಿ ಅನೇಕ ಮನೆಗಳನ್ನು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಕೊಡವೂರಿನ ಸಂಘ ಸಂಸ್ಥೆಗಳ ಶ್ರಮದಾನ ಮತ್ತು ಸಹಕಾರದಿಂದ ಈ ಕಾರ್ಯ ನಡೆಯಲಿದೆ ಎಂದು ನಗರಸಭಾ ಸದಸ್ಯ ಕೆ.‌ವಿಜಯ ಕೊಡವೂರು ಹೇಳಿದರು.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಅನುಷ್ಠಾನಕ್ಕೆ ತರಲು ಯತ್ನಿಸಿದರೆ ಬಲಿಷ್ಠ ಸಮಾಜದ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದರು.

ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾತ್ ಕೊಡವೂರು, ಉದ್ಯಮಿ ಜೀವನ್ ಪಾಳೆಕಟ್ಟೆ, ಅಶೋಕ್ ಶೆಟ್ಟಿಗಾರ್, ಚಂದ್ರಕಾಂತ್ ಶೆಟ್ಟಿಗಾರ್, ಉಮೇಶ್, ಮನೋಜ್ ಬೈಲಕೆರೆ, ವಿನಯ್ ಲಕ್ಷೀನಗರ ಮತ್ತಿತರರು  ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply