ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷ ಶ್ರೀ ಸುರೇಶ್ ಗೋಕಾಕ್ ಕೊಡವೂರು ರಾಶಿಪೂಜೆ ಮಹೋತ್ಸವದಲ್ಲಿ ಭಾಗಿ 

ದೇಗುಲಗಳ ನಾಡು ಸುಪ್ರಸಿದ್ಧ ಉಡುಪಿಯ ಹಲವಾರು ವರ್ಷಗಳ ಇತಿಹಾಸವಿರುವ ಮಹತೋಭಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಹಲವಾರು ವರ್ಷಗಳ ನಂತರ ನಡೆದ ಪುಣ್ಯಪ್ರದವಾದ ರಾಶಿ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷ ಶ್ರೀ ಸುರೇಶ್ ಗೋಕಾಕ್ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು.   
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಹುಬ್ಬಳ್ಳಿಯ ಹಂಪಣ್ಣ, ಎಲ್ಲಪ್ಪ, ರಾಮಚಂದ್ರ , ಫಿರೋಜ್ ಉಡುಪಿಯ ಸವಿತಾ ನೋಟಗಾರ, ವೀರಪ್ಪ ಗೌಂಡಿ, ರಮೇಶ ಎಲಿಬಳ್ಳಿ, ಬಸವರಾಜ್, ಶರಣಪ್ಪ, ಮುಂತಾದವರು ಉಪಸ್ಥಿತರಿದ್ದು ಶ್ರೀ ಶಂಕರ ನಾರಾಯಣ ದೇವರ ಕೃಪೆಗೆ ಪಾತ್ರರಾದರು.
ಅಚ್ಚುಕಟ್ಟಾಗಿ ಆಯೋಜಿಸಿದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೂ ಹೆಮ್ಮೆ ಎಣಿಸಿದೆ. ದೂರದ ಹುಬ್ಬಳ್ಳಿಯಿಂದ ಬಂದೆ. ಬರುವಾಗ ಏನೋ ಒಂದು ಪೂಜೆ ನಡಿತಿದೆ ಅಂದು ಕೊಂಡಿದ್ದೆ. ಬಂದ ಮೇಲೆ ತಿಳಿಯಿತು. ಊರಿಗೆ ಊರೇ ಸಂಭ್ರಮಿಸಿ ಅದ್ದೂರಿಯಾಗಿ ರಾಶಿ ಪೂಜಾ ಮಹೋತ್ಸವ ನಡೆಸಿದ್ದಾರೆ. ಬಾರದೆ ಇದ್ದಲ್ಲಿ ಈ ಒಂದು ಅಪೂರ್ವ ಅವಕಾಶ ಕಳೆದುಕೊಂಡಂತಾಗುತಿತ್ತು.  
ಶ್ರೀ ಸುರೇಶ್ ಗೋಕಾಕ್ 
ರಾಜ್ಯಾಧ್ಯಕ್ಷ ,ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ  
 
 
 
 
 
 
 
 
 
 
 

Leave a Reply