ಡ್ಯುಯಲ್ ಸ್ಟಾರ್ ಶಾಲೆಯಲ್ಲಿ ಅಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ

ಉಡುಪಿ : ಡ್ಯುಯಲ್ ಸ್ಟಾರ್ ಶಾಲೆಯು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯ ಸೊಗಡನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಪೋಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ದೇವರ ಬಗೆಗಿನ ಭಕ್ತಿಯನ್ನು ಹಾಗೂ ಸ್ಪರ್ಧಾ ಮನೋಭಾವ ಹುಟ್ಟುಹಾಕುವ ಸದುದ್ದೇಶದಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

30 ಕ್ಕೂ ಹೆಚ್ಚು ಮಕ್ಕಳು ಮನೆಯಲ್ಲಿಯೇ ತಮ್ಮ ಪೋಷಕರ ಸಹಾಯದಿಂದ ಮುದ್ದು ಕೃಷ್ಣ ವೇಷ ಧರಿಸಿ ಶಾಲಾ‌ ಮೊಬೈಲ್ ಫೋನ್ ಗೆ ಪೋಟೋ ಕಳಿಸುವ ಮೂಲಕ ಸಂಭ್ರಮದಿಂದ ಭಾಗವಹಿಸಿದರು.ಕಾರ್ಯಕ್ರಮದ ಪ್ರಾಯೋಜಕರಾಗಿ ಗುರುರಾಜ್ ಅಡಿಗ ,ವಡ್ಡರ್ಸೆ ಹಾಗೂ ಅಕ್ಷತಾ ಮಹೇಶ್ , ಹಳ್ಳಿಹೊಳೆ ಸಹಕರಿಸಿದರು.

ಹಾಗೆಯೇ ಸ್ಪರ್ಧೆಯ ತೀರ್ಪುನ್ನು ತೀರ್ಪುಗಾರರು ಉತ್ತಮ ರೀತಿಯಲ್ಲಿ ನೀಡಿದರು. ಶಾಲೆ ಪ್ರಾರಂಭವಾಗದಿದ್ದರೂ ಕೂಡ ಇಂತಹ ಜನಮೆಚ್ಚುಗೆಯ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ಕುಳಿತಿರುವ ಮಕ್ಕಳಲ್ಲಿ ವೃದ್ಧಿಗೊಳಿಸುತ್ತಿರುವ ಸಂಸ್ಥೆಗೆ , ಪೋಷಕರು ಅಭಿವೃದ್ಧಿಯ ಅಭಿನಂದನೆ ಸಲ್ಲಿಸಿದರು.

 
 
 
 
 
 
 
 
 
 
 

Leave a Reply