ಜಿಲ್ಲಾಸ್ಪತ್ರೆಗೆ ಸಮಾಜ ಸೇವಕರಿಂದ ವಿವಿಧ ಕೊಡುಗೆಗಳು

ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇಲ್ಲಿ ಉಡುಪಿಯ ಸಮಾಜಸೇವಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಇವರು ಇಂದು ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಚ್.ಅಶೋಕ್ ಇವರ ಸಮ್ಮುಖದಲ್ಲಿ ಜಿಲ್ಲಾ ಆಸ್ಪತ್ರೆಗೆ ಬೇಕಾದ ಕೆಲವು ಉಪಯುಕ್ತ ಸಾಮಾಗ್ರಿಗಳನ್ನು ಕೊಡುಗೆ ನೀಡಿದರು.

 ಇದೇ ಸಂದರ್ಭದಲ್ಲಿ ಉಡುಪಿ ನಿವಾಸಿಯಾದ ಗುರುಪ್ರಸಾದ್ ಭಟ್ ಇವರು ನಿತ್ಯಾನಂದ ಒಳಕಾಡು ಇವರೊಂದಿಗೆ ಆಗಮಿಸಿ ಜಿಲ್ಲಾ ಆಸ್ಪತ್ರೆಯ ರೋಗಿಗಳ ವಾರ್ಡಗಳಿಗೆ 5 ಉಚಿತ ಸಿಲಿಂಗ್ ಫ್ಯಾನ್ ಕೊಡುಗೆ ನೀಡಿದರು.

 ನಿತ್ಯಾನಂದ ಒಳಕಾಡು ಮತ್ತು ದಾನಿಗಳಾದ ವೆಂಕಟೇಶ್ ರಾವ್ ಇವರು ವೀಲ್ವೇರ್ ಹಾಗೂ ಬೆಡ್ ರಿಡನ್ ರೋಗಿಗಳಿಗೆ ಬೇಕಾಗುವ ಸಾಮಾಗ್ರಿಗಳನ್ನು ಕೊಡುಗೆ ನೀಡಿದರು.

 ಈ ಒಂದು ಸಂಯೋಜಿತ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ರಾದ ಡಾ.ಎಚ್.ಅಶೋಕ್ ಇವರು ಮಾತನಾಡಿ ಉಳ್ಳವರು ಸತ್ಪಾತ್ಕರಿಗೆ ಮಾಡುವ ದಾನ ದೇಗುಲಕ್ಕೆ ಕೊಡುಗೆ ಕೊಟ್ಟಷ್ಟೇ ಪುಣ್ಯದ ಕೆಲಸವಾಗಿದೆ ಹಾಗೂ ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಈ ತರಹದ ಪುಣ್ಯ ಕೆಲಸಗಳಿಂದ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಸಿಗುವಂತೆ ಆಗಲಿ ಎಂದು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿಯಾದ ಡಾ.ವಾಸುದೇವ್ ಇವರು ಮಾತನಾಡಿ ಕೊಡುಗೈ ದಾನಿಗಳಿಗೆ ಶುಭ ಹರಿಸಿದರು ಹಾಗೂ ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ಸರ್ಜನ್ ರಾದ ಡಾ.ಸುಜಿತ್ ಹಾಗೂ ಜಿಲ್ಲಾ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

 
 
 
 
 
 
 
 
 
 
 

Leave a Reply