ಬ್ರಹ್ಮಾವರ ಬಿಜೆಪಿ ಕಛೇರಿಗೆ ವಿ. ಸುನೀಲ್ ಕುಮಾರ್ ಭೇಟಿ

ಬ್ರಹ್ಮಾವರ : ಇಂದು ಬಿಜೆಪಿ ಕಛೇರಿಗೆ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಭೇಟಿ ನೀಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಶಾಸಕ ಕೆ. ರಘುಪತಿ ಭಟ್ ಗ್ರಾಮಾಂತರಕ್ಕೆ ಆಗಮಿಸಿದ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

  • ರಾತ್ರಿ ಸಮಯದಲ್ಲಿ ಲೈನ್ ಮ್ಯಾನ್ ಮತ್ತು ಅವರಿಗೆ ವಾಹನದ ವ್ಯವಸ್ಥೆ
  • ಮೆಸ್ಕಾಂ ಗೆ ಹೆಚ್ಚಿನ ಸಿಬ್ಬಂದಿ ನೇಮಿಸುವ ಬಗ್ಗೆ
  • ಮಾನ್ಸೂನ್ ಗ್ಯಾಂಗ್ಮಾನ್ ಅವರನ್ನು ಹೆಚ್ಚುವರಿ ಆಗಿ ನೇಮಿಸುವ ಬಗ್ಗೆ
  • ಉಡುಪಿ ಗ್ರಾಮಾಂತರ ಭಾಗದಲ್ಲಿ ತುಂಬಾ ಹಳೆಯ ವಿದ್ಯುತ್ ತಂತಿಯ ಬದಲಾವಣೆ ಬಗ್ಗೆ
  • ಅಗತ್ಯವಿರುವ ಕಡೆ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವ ಬಗ್ಗೆ

ಸರಕಾರಿ ಭೂಮಿಯಲ್ಲಿ ತುಂಬಾ ವರುಷದಿಂದ ವಾಸ್ತವ್ಯ ಇದ್ದವರಿಗೆ ವಿದ್ಯುತ್ ಸಂಪರ್ಕ ನೀಡುವ ಕುರಿತು ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ಮನವಿ ಸಲ್ಲಿಸಲಾಯಿತು. ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಬಿ.ಎನ್ ಶಂಕರ್ ಪೂಜಾರಿ, ಮಂಡಲದ ಪ್ರಭಾರಿ ಶ್ರೀಶ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ ರಾವ್, ನಿಕಟ ಪೂರ್ವ ಅಧ್ಯಕ್ಷರು ಪ್ರತಾಪ್ ಹೆಗ್ಡೆ ಮಾರಾಳಿ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಹಾಗೂ ಪಕ್ಷದ ಹಿರಿಯರು ಜ್ಞಾನ ವಸಂತ ಶೆಟ್ಟಿ, ಪಕ್ಷದ ಮುಖಂಡರು, ಪ್ರಮುಖರು, ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply