ಹೆಬ್ರಿ : ಮರಕ್ಕೆ ಸ್ಕೂಟರ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು!

ಸ್ಕೂಟಿಯೊಂದು ಮರಕ್ಕೆ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ವರಂಗ ಪೇಟೆಯಲ್ಲಿ ಭಾನುವಾರ ಸಂಭವಿಸಿದೆ. ಸೂರಿಮಣ್ಣು ಪ್ರಭಾಚಂದ್ರ ಆಚಾರ್ಯ (50) ಎಂಬವರೇ ದಾರುಣವಾಗಿ ಮೃತಪಟ್ಟ ವ್ಯಕ್ತಿ. ಪ್ರಭಾಚಂದ್ರ ಅವರು ಮುನಿಯಾಲಿನಿಂದ ಸೂರಿಮಣ್ಣು ಕಡೆಗೆ ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಅವಿವಾಹಿತರಾಗಿರುವ ಮೃತರು ಓರ್ವ ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply