ಸಚಿವರೊಂದಿಗೆ ಇದ್ದವರು ಕರೋನಾ ಟೆಸ್ಟ್ ಮಾಡಿಸಿದ್ರಾ 

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ರವರು ಆಯೋಜಿಸಿದ್ದ ತರವಾಡು ಧರ್ಮನೇಮ ಅದ್ದೂರಿಯಾಗಿ ನಡೆಯಿತು. ರಾಜಕೀಯ ಮುಖಂಡರ ದಂಡೇ ಈ ನೇಮೋತ್ಸವಕ್ಕೆ ಸಾಕ್ಷಿಯಾಗಿತ್ತು. 
ಆದರೆ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತನಗೆ ಕರೋನಾ  ಪಾಸಿಟೀವ್ ಎಂದು ಬರೆದು ಕೊಂಡಿದ್ದಾರೆ. ಈಗ ನೋಡಿ ನೇಮೋತ್ಸವದಲ್ಲಿ ಅವರೊಂದಿಗಿದ್ದವರಿಗೆ ತವಕ.. ತಲ್ಲಣ.   
ಸಚಿವ ಈಶ್ವರಪ್ಪ ಹಾಗು ಶೋಭಾ ಕರಂದ್ಲಾಜೆಯಂತೂ ಮಾಸ್ಕ್ ಧರಿಸಿದೇ ಕೋಟ ಶ್ರೀನಿವಾಸ ಪೂಜಾರಿ ಯವರೊಂದಿಗೆ ಆಸೀನರಾಗಿದ್ದಾರೆ. ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿಯಂತೂ ಮಾಸ್ಕ್ ಹಾಕಿ ಬಚಾವ್ ಆಗಿದ್ದಾರೆ.  ಸಚಿವರೊಂದಿಗೆ ಇದ್ದವರು ಕರೋನಾ ಟೆಸ್ಟ್ ಮಾಡಿಸಿದ್ರಾ ಎಂದು ಸಾರ್ವಜನಿಕ ವಲಯದಲ್ಲಿ ಮಾತುಕತೆ ನಡೆಯುತ್ತಿದೆ. 
 
 
 
 
 
 
 
 
 
 
 

Leave a Reply