ಉಡುಪಿ: ನನ್ನ ಅಭಿನಂದನಾ ಸಮಾರಂಭಗಳಲ್ಲಿ ಹಾರ ಹೂಗುಚ್ಚಗಳನ್ನು ತರಬೇಡಿ. ಕೊಡಲೇ ಬೇಕೆಂದಿದ್ದರೆ ಕನ್ನಡ ಪುಸ್ತಕ ನೀಡಿ ಎಂದು ಸಚಿವ ವಿ. ಸುನಿಲ್ ಕುಮಾರ್ ಕಾರ್ಕಳ ತನ್ನ ಅಭಿಮಾನಿಗಳಿಗೆ ನೀಡಿದ ಮನವಿ. ಸಚಿವರಾದ ಸಂದರ್ಭದಲ್ಲಿ ವಿವಿಧೆಡೆ ಸನ್ಮಾನ, ಅಭಿನಂದನೆ ಸಾಮಾನ್ಯ.
ಈ ಸಂದರ್ಭದಲ್ಲಿ ಹಾರ, ಹೂಗುಚ್ಛ, ಸ್ಮರಣಿಕೆ ನೀಡುವುದು ಮಾಮೂಲು. ಇದನ್ನು ಅರಿತ ಸಚಿವ ಸುನಿಲ್ ಕುಮಾರ್ ತನ್ನನ್ನು ಅಭಿನಂದಿಸುವವರು ಕನ್ನಡ ಪುಸ್ತಕ ಕೊಡಿ. ಅವುಗಳನ್ನು ಕಾರ್ಕಳ ಗ್ರಂಥಾಲಯಕ್ಕೆನೀಡುವು ದಾಗಿ ತಿಳಿಸಿದ್ದಾರೆ.