ಜೆಸಿಐ ಕಲ್ಯಾಣಪುರಕ್ಕೆ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರದ ಜೆಸಿ ಪೊನ್ನರಾಜ್ ಭೇಟಿ

ದಿನಾಂಕ :12-3-2022ರಂದು ಜೇಸಿಐ ಕಲ್ಯಾಣಪುರಕ್ಕೆ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರು ಜೆಸಿ ಪೊನ್ನರಾಜ್ ರವರು ಭೇಟಿ ನೀಡಿ ಘಟಕದ ವತಿಯಿಂದ ಕಲ್ಯಾಣಪುರ ಕಾಲೇಜು ತಿರುವಿನಲ್ಲಿ ಅಳವಡಿಸಿದ ರೋಡ್ ಸೇಫ್ಟಿ ಮಿರರ್ ನ್ನು ರಾಷ್ಟ್ರೀಯ ಉಪಾಧ್ಯಕ್ಷರು ಉದ್ಘಾಟಿಸಿದರು.

ನಂತರ ಎಲ್ ವಿ ಪಿ ಶಾಲೆಗೆ ಕುರ್ಚಿ ಗಳನ್ನು ಹಸ್ತ0ತರಿಸಲಾಯಿತು. ರಾಷ್ಟ್ರೀಯ ಉಪಾಧ್ಯಕ್ಷರಿಗೆ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷರು ಜೆಸಿ ಜಯಶ್ರೀ ಎಲ್ಲರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ವಲಯದ ಅಧ್ಯಕ್ಷರಾದ ಜೆಸಿ ರೊಯನ್ ಉದಯ ಕ್ರಾಸ್ತ, ವಲಯ ಉಪಾಧ್ಯಕ್ಷರಾದ ಜೆಸಿ ದಿನೇಶ್ ಶೆಟ್ಟಿ, ಸ್ಥಾಪಕ ಅಧ್ಯಕ್ಷರಾದ ಜೆಸಿ ಜಗದೀಶ್ ಕೆಮ್ಮಣ್ಣು, ಹಾಗೂ ಎಲ್ಲ ಪೂರ್ವಧ್ಯಕ್ಶರುಗಳು, ವಲಯಾಧಿಕಾರಿಗಳು, ಘಟಕದ ಸದಸ್ಯರುಗಳು, ಕಾರ್ಯಕ್ರಮದ ನಿರ್ದೇಶಕಿ ಜೆಸಿ ರೋಹಿನಿ ಚಿತ್ರ ಹಾಗೂ ಲೇಡಿ ಜೆಸಿ ಅನಿತಾ, ಜೂನಿಯರ್ ಜೆಸಿ ರೆಚೇಲ್, ಉಪಸ್ಥಿತರಿದ್ದರು ಕಾರ್ಯದರ್ಶಿಜೆಸಿ ಅನುಸೂಯ ಅನಿಲ್ ಧನ್ಯವಾದ ನೀಡಿದರು .

 
 
 
 
 
 
 
 
 
 
 

Leave a Reply