“ಸುವರ್ಣ ತ್ರಿಭುಜ” ಬೋಟ್ ಮುಳುಗಡೆಯಾಗಿ ಕಣ್ಮರೆಯಾದ ಮೀನುಗಾರರ ಕುಟುಂಬಕ್ಕೆ ತಲಾ ರೂ. 10 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಶಾಸಕ ರಘುಪತಿ ಭಟ್ ಮನವಿ
ಮಂಗಳೂರಿನಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರನ್ನು ಗುರುವಾರ ಶಾಸಕ ಕೆ ರಘುಪತಿ ಭಟ್ ರವರು ಭೇಟಿಯಾಗಿ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಕಣ್ಮರೆಯಾಗಿ 7 ಜನ ಮೀನುಗಾರರ ಕುಟುಂಬಕ್ಕೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಕನಿಷ್ಠ ತಲಾ ರೂ. 10 ಲಕ್ಷ ಪರಿಹಾರವನ್ನು ದೊರಕಿಸಿಕೊಡುವಂತೆ ಮನವಿ ಮಾಡಿದರು.
“ಸುವರ್ಣ ತ್ರಿಭುಜ” ಮೀನುಗಾರಿಕಾ ದೋಣಿಯು ದಿನಾಂಕ 15-12-2018 ರಂದು ಸಮುದ್ರದಲ್ಲಿ ಅಪಘಾತಕ್ಕಿಡಾಗಿ ಮುಳುಗಡೆ ಯಾಗಿದ್ದು, ಮಾಲಕ ಸಹಿತ 7 ಜನ ಮೀನುಗಾರರು ಕಣ್ಮರೆಯಾಗಿರುತ್ತಾರೆ. ಕುಟುಂಬದವರು ಇವರನ್ನೇ ಅವಲಂಬಿಸಿ ಕೊಂಡಿದ್ದು, 7 ಜನರ ಕುಟುಂಬದ ಆರ್ಥಿಕ ಪರಿಸ್ಥಿತಿಯು ತುಂಬಾ ಹದಗೆಟ್ಟಿರುವುದರಿಂದ ಅಗತ್ಯ ನೆರವು ಒದಗಿಸುವಂತೆ ಮನವಿ ಮಾಡಲಾಗಿದೆ.