ಉಡುಪಿ: ಹೋಮ ಕುಂಡ ಕೊಲೆ ಪ್ರಕರಣ ಸಾಬೀತು- ಪತ್ನಿ, ಪತ್ನಿಯ ಗೆಳೆಯ, ಮಗ (ಆರೋಪಿಗಳಿಗೆ) ಜೀವಿತಾವಧಿ ಜೈಲು ಶಿಕ್ಷೆ

ರಾಜ್ಯದಲ್ಲಿಯೇ ಭಾರೀ ಸಂಚಲನ ಮೂಡಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ. ಭಾಸ್ಕರ್ ಶೆಟ್ಟಿಯನ್ನು ಕೊಲೆಗೈದು ಹೋಮ ಕುಂಡದಲ್ಲಿ ಸುಟ್ಟಿದ್ದ ಪ್ರಮುಖ ಆರೋಪಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಶೆಟ್ಟಿ ಗೆಳೆಯ ನಿರಂಜನ್ ಭಟ್ ದೋಷಿಗಳು ಎಂದು ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್ ಈ ತೀರ್ಪು ನೀಡಿದ್ದಾರೆ. ಕೊಲೆಗೈದು ಹೋಮಕುಂಡದಲ್ಲಿ ಸುಟ್ಟಿರುವ ಆರೋಪ ಸಾಬೀತಾಗಿದ್ದು ಈ  ಆರೋಪಿಗಳಿಗೆ
ಜೀವಿತಾವಧಿ ಜೈಲು ಶಿಕ್ಷೆ . 
ಆದರೆ ಐದನೇ ಆರೋಪಿ ಚಾಲಕ ರಾಘವೇಂದ್ರ ಖುಲಾಸೆಗೊಂಡಿದ್ದಾನೆ. ನಾಲ್ಕನೇ ಆರೋಪಿ

ನಿರಂಜನ್ ಭಟ್  ತಂದೆ ಶ್ರೀನಿವಾಸ್ ಭಟ್ ಅನಾರೋಗ್ಯದಿಂದ ಈ ಹಿಂದೆಯೇ  ಮೃತ ಪಟ್ಟಿದ್ದರು. 

 
 
 
 
 
 
 
 
 
 
 

Leave a Reply