ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ‘ಬಿಪಾಪ್ ಸಿಸ್ಟಮ್’ ಮಿಷನ್ ಅನ್ನು ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಷಮಧುಸೂದನ್ ನಾಯಕರಿಗೆ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ ಹಸ್ತಾಂತರಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಈಗಾಗಲೇ ಸುಮಾರು 50 ಪಿಪಿಇ ಕೀಟಗಳನ್ನು, ಮನೆಯ ಮಾಡಿಗೆ ಹೊದಿಸುವ ಟಾರ್ಪಲ್ ಗಳನ್ನು, ಆಕ್ಸಿಮೀಟರ್ ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಡಾ. ಮಧುಸೂದನ್ ನಾಯಕ್ ಮಾತನಾಡಿ ಭಾರತೀಯ ರೆಡ್ ಕ್ರಾಸ್ ಉಡುಪಿ, ಜಿಲ್ಲಾ ಆಸ್ಪತ್ರೆಗೆ ಅಗತ್ಯವಿರುವ ಹಲವಾರು ಹಲವಾರು ಸವಲತ್ತುಗಳನ್ನು ನೀಡುವುದು ಶ್ಲಾಘನೀಯ ಎಂದರು.
ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಟಿ, ಗೌರವ ಕಾರ್ಯದರ್ಶಿ ಜಯ ರಾಮಾಚಾರ್ಯ ಸಾಲಿಗ್ರಾಮ,ಗೌರವ ಖಜಾಂಜಿ ಡಾ.ಅರವಿಂದ ನಾಯಕ್ ಅಮ್ಮುಂಜೆ, ಡಿ.ಡಿ ಆರ್.ಸಿ ಕಾರ್ಯದರ್ಶಿ ಕೇಶವ ಹೆಗಡೆ,ಆಡಳಿತ ಮಂಡಳಿಯ ಸದಸ್ಯೆ ರಮಾದೇವಿ, ಭಾರತೀಯ ರೆಡ್ ಕ್ರಾಸ್ ಬ್ರಹ್ಮಾವರ ತಾಲೂಕು ಶಾಖಾ ಸಭಾಪತಿ ರಾಜರಾಮ ಶೆಟ್ಟಿ, ಸದಸ್ಯ ಕಿಶನ್ ಹೆಗಡೆ ಕೊಳೆಬೈಲು ಉಪಸ್ಥಿತರಿದ್ದರು.ಕೆ. ಜಯರಾಮಾಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.