ಕೋಟ : ವೃದ್ದೆಯೋರ್ವರು ಕಸಕ್ಕೆ ಬೆಂಕಿಹಾಕುವ ವೇಳೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದ ಮಣೂರಿನಲ್ಲಿ ನಡೆದಿದೆ.
ಬಾಗಿ (68ವರ್ಷ) ಎಂಬವರೇ ಮೃತ ದುರ್ದೈವಿ.ಮಣೂರು ಜಟ್ಟಿಗೇಶ್ವರ ದೇವಸ್ಥಾನ ಸಮೀಪದ ನಿವಾಸಿಯಾಗಿರುವ ಇವರು ತಮ್ಮ ಮನೆಯಲ್ಲಿ ಅಕ್ಕಪಕ್ಕದ ಕಸಗಟ್ಟಿಗಳನ್ನು ಒಟ್ಟುಗೂಡಿಸಿ ಬೆಂಕಿ ಹಾಕುವ ವೇಳೆ ಸೀರೆಗೆ ಬೆಂಕಿ ತಾಗಿಕೊಂಡಿತ್ತು. ಇದೇ ಸಮಯ ಬಾಗಿ ಅವರಿಗೆ ತಲೆ ಸುತ್ತು ಬಂದು ಬೆಂಕಿಯ ರಾಶಿಗೆ ಬಿದ್ದಿದ್ದಾರೆ.
ಈ ಘಟನೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.