ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಋತುಬಂಧಬಗ್ಗೆ ಮಾಹಿತಿ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಮಣಿಪಾಲ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರ ಸಂಘ ಇವರ ಆಶ್ರಯದಲ್ಲಿ ವಿಶ್ವ ಋತುಬಂಧ ದಿನದ ಪ್ರಯುಕ್ತ ನಡೆದ ಮಾಹಿತಿ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ಶುಕ್ರವಾರ ಡಾ  ಎ ವಿ ಬಾಳಿಗ ಆಸ್ಪತ್ರೆಯಲ್ಲಿ  ನಡೆಯಿತು. 
 ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ  ಆಗಮಿಸಿದ ಡಾ. ಇಂದಿರಾ ಶಾನುಭಾಗ್ ಸ್ತ್ರೀ ರೋಗ ತಜ್ಞರು ಸಿಟಿ ಆಸ್ಪತ್ರೆ, ಉಡುಪಿ ಇವರು ಮಹಿಳೆಯರ ಋತುಬಂಧ ಬಗ್ಗೆ ಜೀವನ ಶೈಲಿ, ಸ್ವಚ್ಛತೆ, ಆಹಾರ ಕ್ರಮ ವ್ಯಾಯಾಮ ಯೋಗದ ಮಹತ್ವದ ಬಗ್ಗೆ ಮಾತನಾಡಿದರು.  ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಸೌಜನ್ಯ ಶೆಟ್ಟಿ, ಡಾ ರಾಜಲಕ್ಷ್ಮಿ ಸ್ತ್ರೀ ರೋಗ ತಜ್ಞರು ಉಡುಪಿ ಇವರು ಮಹಿಳೆಯರ ಋತುಬಂಧದ ಬಗ್ಗೆ  ಮಾತನಾಡಿದರು. 
ಕುಮಾರಿ ಪಾವನ ಇವರಿಂದ ಪ್ರಾರ್ಥನೆ ಮಾಡಲಾಯಿತು, ನರ್ಸಿಂಗ್ ಸಿಬ್ಬಂದಿಯಾದ ಶ್ರೀಮತಿ ಪ್ರಮೀಳಾ ಇವರು ಸ್ವಾಗತಿಸಿದರು. ಆಪ್ತಸಮಾಲೋಚಕಿ ಶ್ರೀಮತಿ ಪದ್ಮ ರಾಘವೇಂದ್ರ ವಂದಿಸಿದರು.  ಸುಚಿತ್ರ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಉಚಿತ ಮೂಳೆ ಖನಿಜ ಸಾಂದ್ರತೆ ತಪಾಸಣಾ ಶಿಬಿರ ಮಾಡಲಾಯಿತು.
 
 
 
 
 
 
 
 
 
 
 

Leave a Reply