ಬೈಲೂರು ಬ್ರಾಹ್ಮಣ ಸಭಾದ 9ನೇ ವಾರ್ಷಿಕ ಮಹಾಸಭೆಯು ಭಾನುವಾರದಂದು ಅಧ್ಯಕ್ಷೆ ಪದ್ಮಲತ ವಿಷ್ಣುರವರ ಅಧ್ಯಕ್ಷತೆಯಲ್ಲಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಜರಗಿತು. ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು.
ಅತಿಥಿಗಳಾಗಿ ಶ್ರೀ ಮಂಜುನಾಥ ಉಪಾದ್ಯಾಯ, ಶ್ರೀ ಎ. ಪಿ ಕೊಡಂಚರು, ಮಹಿಳಾ ಸಂಚಾಲಕಿ ರೂಪಶ್ರೀ ರಾವ್ ಮತ್ತು ಉಪಾಧ್ಯಕ್ಷ ಶ್ರೀನಿವಾಸ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಮಿತ್ರಾ ಕೆರೆಮಠ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ನಾರಾಯಣ ದಾಸ್ ಉಡುಪ ಲೆಕ್ಕ ಪತ್ರ ಮಂಡಿಸಿದರು.
ಜಯರಾಮ ಆಚಾರ್ಯ ನಿರೂಪಿಸಿದರು ಶ್ರೀಕನ್ಯಾ ಪ್ರಾರ್ಥಿಸಿದರು. ಗಣೇಶ್ ಭಟ್ ಧನ್ಯವಾದವಿತ್ತರು. ಬಳಿಕ ವಾರ್ಷಿಕ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ಸಂಪನ್ನಗೊಂಡಿತು.