ಬೈಲೂರು ಬ್ರಾಹ್ಮಣ ಸಭಾದ 9ನೇ ವಾರ್ಷಿಕ ಮಹಾಸಭೆ

ಬೈಲೂರು ಬ್ರಾಹ್ಮಣ ಸಭಾದ 9ನೇ ವಾರ್ಷಿಕ ಮಹಾಸಭೆ​ಯು ಭಾನುವಾರದಂದು ಅಧ್ಯ​ಕ್ಷೆ ಪದ್ಮಲತ ​​​ವಿಷ್ಣುರವರ ಅಧ್ಯಕ್ಷತೆಯಲ್ಲಿ ​ಬೈಲೂರು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ​ಜರಗಿತು​. ​ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ​ನೆರವೇರಿಸಲಾಯಿತು. 
ಅತಿಥಿಗಳಾಗಿ​​ ಶ್ರೀ ಮಂಜುನಾಥ ಉಪಾದ್ಯಾಯ​, ಶ್ರೀ ಎ. ಪಿ ಕೊಡಂಚರು​, ಮಹಿಳಾ ಸಂಚಾಲಕಿ ರೂಪಶ್ರೀ ರಾವ್ ಮತ್ತು ಉಪಾಧ್ಯಕ್ಷ ಶ್ರೀನಿವಾಸ ಆಚಾರ್ಯ​  ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಮಿತ್ರಾ ಕೆರೆಮ ವಾರ್ಷಿಕ ​ವರದಿ ವಾಚಿಸಿದರು.​ ​ಕೋಶಾಧಿಕಾರಿ ನಾರಾಯಣ ದಾಸ್ ಉಡುಪ​ ಲೆಕ್ಕ ಪತ್ರ ಮಂಡಿಸಿದರು​. 
 
ಜಯರಾಮ ಆಚಾರ್ಯ ನಿರೂಪಿಸಿದರು  ಶ್ರೀಕನ್ಯಾ ಪ್ರಾರ್ಥಿಸಿದರು​. ​ಗಣೇಶ್ ಭಟ್ ಧನ್ಯವಾದ​ವಿತ್ತರು.   ಬಳಿಕ ವಾರ್ಷಿಕ ​ಸಾಮೂಹಿಕ ​ದುರ್ಗಾ ನಮಸ್ಕಾರ ಪೂಜೆ ​ಸಂಪನ್ನಗೊಂಡಿತು.  

​​
 
 
 
 
 
 
 
 
 
 
 

Leave a Reply