ನಿಟ್ಟೂರು ಶ್ರೀಬಬ್ಬುಸ್ವಾಮಿ ಸೇವಾ ಸಮಿತಿ ಅಸ್ತಿತ್ವಕ್ಕೆ

ಶ್ರೀ ಬಬ್ಬುಸ್ವಾಮಿ ಸೇವಾಸಮಿತಿಯ ಉದ್ಘಾಟನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 28-1-2023 ರಂದು ಬಹಳ ವಿಜ್ರಂಭಣೆಯಿಂದ ನಡೆಯಿತು.

ಸೇವಾಸಮಿತಿಯನ್ನು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಸಮಿತಿಯ ಅದ್ಯಕ್ಷರಾದ ಶ್ರೀ ಕರಂಬಳ್ಳಿ ಶಿವರಾಮ್ ಶೆಟ್ಟಿ ಹಾಗೂ ಸಭಾ ಕಾರ್ಯಕ್ರಮವನ್ನು ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಉದ್ಘಾಟಿಸಿದರು, ದಿಕ್ಸೂಚಿ ಭಾಷಣವನ್ನು ಡಾ. ವಿಜಯೇಂದ್ರ ವಸಂತ್ ರವರು ಮಾಡಿದರು. ವೇದಿಕೆಯಲ್ಲಿ ಆಹ್ವಾನಿತ ಗಣ್ಯರು, ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ನವೀನ್ ಹೆಚ್.ಕೆ ಕುಕ್ಕುಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಶಿವ ದೂತೆ ಗುಳಿಗೆ ತುಳು ನಾಟಕದ ಪ್ರದರ್ಶನ ನಡೆಯಿತು.

 
 
 
 
 
 
 
 
 
 
 

Leave a Reply