ಅಪಘಾತದಲ್ಲಿ ಇಹಲೋಕ ತ್ಯಜಿಸಿದ ಛಾಯಾಗ್ರಾಹಕ ಅಶೋಕ್ ಕುಮಾರ್ ಶೆಟ್ಟಿ  ಸ್ವಗೃಹದಲ್ಲಿ ಅಂತಿಮ ದರ್ಶನ

ಕುಂದಾಪುರ : ತುಮಕೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಿನ್ನೆ ಬೆಳಗಿನ ಜಾವ ಅಪಘಾತವಾಗಿ ಸಾವನ್ನಪ್ಪಿದ್ದ ಖ್ಯಾತ ಫೋಟೋಗ್ರಾಫರ್ ಅಶೋಕ್ ಕುಮಾರ್ ಶೆಟ್ಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ ಲಾಗಿತ್ತು.

ಕುಂದಾಪುರ ಆಸ್ಪತ್ರೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಅಂತಿಮ ಯಾತ್ರೆ ಪ್ರಾರಂಭಿಸಿ ನಾವುಂದದ ಶೆಟ್ಟಿಯವರ ಸ್ವಗ್ರಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸೌತ್ ಕೆನರಾ ಫೋಟೋಗ್ರಾಪರ್ ಅಸೋಶಿ ಯೇಶನ್ ನ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿದ್ದ ಅಶೋಕ್ ಶೆಟ್ಟಿಯವರ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ಬೆಳಿಗ್ಗೆ 7 ಗಂಟೆ ಯಿಂದಲೇ ಅಭಿಮಾನಿಗಳು, ಗಣ್ಯರು, ಜನ ಪ್ರತಿನಿಧಿಗಳು, ಬಂಧು ಮಿತ್ರರು ಆಗಮಿಸುತ್ತಿ ದ್ದರು.

ಶಾಸಕ ಸುಕುಮಾರ್ ಶೆಟ್ಟಿ ಆಗಮಿಸಿ ಆಪ್ತ ರಾಗಿದ್ದ ಅಶೋಕ್ ಶೆಟ್ಟಿಯವರ ಪಾರ್ಥಿವ ಶರೀರವನ್ನು ವೀಕ್ಷಿಸಿ ಭಾವುಕರಾದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿನ್ನೆಯೇ ಆಸ್ಪತ್ರೆಯಲ್ಲಿ ಅಂತಿಮದರ್ಶನ ಪಡೆದಿದ್ದರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿ ಯೇಶನ್ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಹಾಗು ಎಲ್ಲಾ 14 ವಲಯಗಳ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರು ಅಪಾರ ಸಂಖ್ಯೆಯಲ್ಲಿ ಆಗ ಮಿಸಿ ವೃತ್ತಿ ಮಿತ್ರನಿಗೆ ಅಂತಿಮ ವಿದಾಯದ ನಮನ ಸಲ್ಲಿಸಿದರು. ಕುಂದಾಪುರ ವಲಯದ ಸದಸ್ಯರು ಅಚ್ಚುಕಟ್ಟಾಗಿ ಅಂತಿಮ ದರ್ಶನದ ವ್ಯವಸ್ಥೆಯನ್ನು ನಡೆಸಿದ್ದರು.

ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದ ಅಶೋಕ್ ಶೆಟ್ಟಿ ಫೋಟೋಗ್ರಫಿ ಯಲ್ಲಿ ತಮ್ಮದೇ ಆದ ಛಾಪನ್ನು ಜಿಲ್ಲೆಯಲ್ಲಿ ಮೂಡಿಸಿದ್ದರು.

ರಾಜಕೀಯದಲ್ಲೂ ತನ್ನ ವರ್ಚಸನ್ನು ಬೀರಿ ಹಲವರಿಗೆ ವಿವಿಧ ಕೆಲಸ ಕಾರ್ಯಗಳನ್ನು ನಡೆಸುವಲ್ಲಿ ಕೈ ಜೋಡಿಸಿದ್ದರು.

ಅಂತೂ ಅತೀ ಸಣ್ಣ ಪ್ರಾಯದಲ್ಲಿ ಬರಲಾರದ ಊರಿಗೆ ತೆರಳಿದ ಅಶೋಕ್ ಕುಮಾರ್ ಶೆಟ್ಟಿಯವರಿಗೆ ಟೀಮ್ ಕರಾವಳಿ ನುಡಿ ನಮನ ಸಲ್ಲಿಸುತ್ತಿದೆ.

 
 
 
 
 
 
 
 
 
 
 

Leave a Reply