ಕೊಡವೂರು: ಅಕ್ರಮ ಮಸೀದಿ ತೆರವಿಗಾಗಿ ಹೋರಾಡುತ್ತಿರುವ ಬಿಜಿಪಿ ಮುಖಂಡ ವಿಜಯ್ ಕೊಡವೂರು ಅವರಿಗೆ ಕೊಲೆಗಯ್ಯುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಅಕ್ರಮ ಮಸೀದಿಗೆ ನೀಡಿದ್ದ ಜಾಗವನ್ನು ಸರಕಾರ ಹಿಂಪಡೆದ ಹಿನ್ನೆಲೆ ಹಕುಲ್ ಮುಬಿನ್ ಎಂಬಾತ ವಿಜಯ್ ರಿಗೆ ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟಿ ಕೊಲೆ ಬೆದರಿಕೆ ಹಾಕಿದ್ದಾನೆ.
ಸದ್ಯ ಮಲ್ಪೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ವಿಜಯ ಕೊಡವೂರು ತನಗೆ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.