ಅಪಘಾತಕ್ಕೊಳಗಾದ ಆತ್ರಾಡಿ ಚೆನ್ನಿಬೆಟ್ಟು ಆಶೀಶ್ ಶೆಟ್ಟಿಯವರಿಗೆ ಊರ ದಾನಿಗಳಿಂದ ಧನ ಸಹಾಯ ಹಸ್ತಾಂತರ

ಪರ್ಕಳದ ದೇವಿ ನಗರ ಬಳಿ ಇತ್ತೀಚಿಗೆ ಅಪಘಾತಕ್ಕೀಡಾಗಿ ತನ್ನ ಕೈಯನ್ನು ಕಳೆದುಕೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತ್ರಾಡಿ ಚೆನ್ನಿಬೆಟ್ಟು ನಿವಾಸಿ ಆಶೀಶ್ ಶೆಟ್ಟಿಯವರಿಗೆ ಊರಿನ ದಾನಿಗಳಾದ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಾಧು ಪೂಜಾರಿ ಮದಗ, ದೀಪಕ್ ಪೂಜಾರಿ ಮದಗ, ಮಿಥುನ್ ಶೆಟ್ಟಿ ಮದಗ ಇವರ ನೇತೃತ್ವದಲ್ಲಿ ಗ್ರಾಮಸ್ಥರಿಂದ ಸಂಗ್ರಹಿಸಿದ ರೂ.2,06,500/- ಧನ ಸಹಾಯವನ್ನು ಸ್ಥಳೀಯ ಪ್ರಮುಖರಾದ ಶೇಖರ್ ಶೆಟ್ಟಿ ಮತ್ತು ಸತ್ಯಾನಂದ ನಾಯಕ್ ರವರ ಉಪಸ್ಥಿತಿಯಲ್ಲಿ ಅಶೀಶ್ ಶೆಟ್ಟಿಯವರ ತಂದೆ ಪ್ರಸಾದ್ ಶೆಟ್ಟಿ ಮತ್ತು ತಾಯಿ ಶಕುಂತಲಾ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು.

ಚಿಕಿತ್ಸೆಯ ವೆಚ್ಚ ಸುಮಾರು ರೂ.4,00,000/- ತಗಲಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಮದಗದ ಎಮ್.ಎಫ್.ಸಿ. ತರುಣರು ನೀಡಿದ ಕರೆಯಂತೆ ಅಶೀಶ್ ಶೆಟ್ಟಿಯವರ ಬ್ಯಾಂಕ್ ಖಾತೆಗೆ ರೂ.1,48,000/- ಜಮಾಗೊಂಡಿದ್ದು, ಇನ್ನಷ್ಟು ಧನ ಸಹಾಯ ಹರಿದು ಬರುವ ನಿರೀಕ್ಷೆ ಇದೆ. ಸಹಾಯ ಹಸ್ತ ಚಾಚಿದ ದಾನಿಗಳಿಗೆ ಹಾಗೂ ಶ್ರಮಿಸಿದ ಎಲ್ಲರಿಗೂ ಅಶೀಶ್ ಶೆಟ್ಟಿ ಮತ್ತು ಕುಟುಂಬಿಕರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದ್ದಾರೆ.

 
 
 
 
 
 
 
 
 
 
 

Leave a Reply