ಅಖಿಲ ಭಾರತ ಸಹಕಾರಿ ಸಪ್ತಾಹ: ಸಹಕಾರ ಸಂಸ್ಥೆಯಲ್ಲಿ ಸರಳ ವ್ಯಪಾರ ಪ್ರಕ್ರಿಯೆ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.  ಬೆಂಗಳೂರು , ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಉಡುಪಿ , ಉಡುಪಿ ಇಂಡಸ್ಟ್ರಿಯಲ್  ಕೋ – ಆಪರೇಟಿವ್ ಸೊಸೈಟಿ ಲಿ, ಕಿನ್ನಿಮೂಲ್ಕಿ ಉಡುಪಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ನಡೆದ‌ 70 ನೇ ಅಖಿಲ ಭಾರತ ಸಹಕಾರಿ  ಸಪ್ತಾಹದ  ಅಂಗವಾಗಿ ಶುಕ್ರವಾರ  ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ  ಜಗನ್ನಾಥ  ಸಭಾ ಭವನದಲ್ಲಿ ಜರಗಿತು    

 
ಮುಖ್ಯಅತಿಥಿಯಾಗಿ  ಉಡುಪಿ ನಗರ ಸಭೆಯ ಪೌರಾಯುಕ್ತ ರಾಯಪ್ಪ ಉದ್ಘಾಟಸಿ ಮಾತನಾಡಿದರು. ಸಹಕಾರ ರಂಗದಲ್ಲಿ ಐಕ್ಯತೆ , ಬದ್ಧತೆ , ನಿಷ್ಠೆ ಯಿಂದ ಸೇವೆ ನೀಡಿದರೆ ಯಶಸು ಖಂಡಿತ. ಇದಕ್ಕೆ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯಸ್ಥ ಜಯಕರ ಶೆಟ್ಟಿ ಇಂದ್ರಾಳಿಯೇ ಸಾಕ್ಷಿ. ಸಹಕಾರ ಸಂಘಗಳಲ್ಲಿ  ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಜಾರಿಗೆ ತನ್ನಿ ಎಂದು ವಿನಂತಿಸಿದರು. 
 
 ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ ಬೆಂಗಳೂರು ನಿರ್ದೇಶಕ ಬಿ. ಜಯಕರ ಶೆಟ್ಟಿ ಇಂದ್ರಾಳಿ‌ ಇವರು‌ ಮಾತನಾಡುತ್ತಾ ಸಹಕಾರಿ ಕ್ಷೇತ್ರದಲ್ಲಿ ಯುವ ಜನಾಂಗ ಸೆಳೆಯಲು ಡಿಜಿಟಲ್ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಸ್ಥಳೀಯರು ತಮ್ಮ ತಮ್ಮ ವ್ಯಹಾರವನ್ನು ಸಹಕಾರಿ ಬ್ಯಾಕಿಂಗ್ ಮಾಡುವಂತೆ ವಿನಂತಿಸಿದರು. 
                                                                                                      ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಇಂಡಸ್ಟ್ರಿಯಲ್  ಕೋ – ಆಪರೇಟಿವ್ ಸೊಸೈಟಿ  ಅಧ್ಯಕ್ಷ ಅರುಣ ಕುಮಾರ್ ವಹಿಸಿದ್ದರು                                                                                                                                                                                      ಸಹಕಾರ ಸಂಸ್ಥೆಯಲ್ಲಿ  ಸರಳ ವ್ಯಪಾರ ಪ್ರಕ್ರಿಯೆ  ಕುರಿತು  ಎಮ್ ಜಿ ಎಮ್  ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಸುರೇಂದ್ರನಾಥ ಶೆಟ್ಟಿ  ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ  ದ.ಕ ಸಹಕಾರಿ ಹಾಲು ಒಕ್ಕೊಟದ ನಿರ್ದೇಶಕ ರವಿರಾಜ್ ಹೆಗ್ಡೆ,  ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ, ಅಲೆವೂರು ಹರೀಶ್ ಕಿಣಿ, ಶಂಕರ ಪೂಜಾರಿ ಕಟಪಾಡಿ, ಮನೋಜ್ ಕರ್ಕೇರ, ಮಟ್ಟಾರ್ ಗಣೇಶ ಕಿಣಿ, ಅಶೋಕ್ ಕುಮಾರ್  ಬಲ್ಲಾಳ, ಹಾಗೂ  ಉಭಯ ಸಹಕಾರಿ ಬ್ಯಾಂಕ್ ಗಳ ನಿರ್ದೇಶಕ ಮಂಡಳಿ ಸದಸ್ಯರು, ನೂರಾರು ಸಹಕಾರಿಗಳು, ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಡುಪಿ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿ  ಸಿ.ಇ.ಒ ರಾಜೇಶ ಹೆಗ್ಡೆ ಸ್ವಾಗತಿಸಿದರು. ಪ್ರವೀಣ ಕುಮಾರ, ಮತ್ತು ರಮೇಶ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ ವಂದಿಸಿದರು

 
 
 
 
 
 
 
 
 
 
 

Leave a Reply