ರಾಮ ಮಂದಿರ ನಿರ್ಮಾಣದಲ್ಲಿ  ಹೀಗೂ ಸಹಕರಿಸಬಹುದು 

ಉಡುಪಿ: ಕೋಟಿ ಕೋಟಿ ಭಾರತೀಯ​ರ ‘ಭಾವಸೇತು’ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದಲ್ಲಿ  ಪ್ರತಿಯೊಬ್ಬರೂ  ತಾವು ಕೈಜೋಡಿಸಬೇಕೆಂಬ ತುಡಿತ ಹೊಂದಿದ್ದಾರೆ.

ರಾಮ ಭಕ್ತರಿಗೆ ತಮ್ಮ ಬಯಕೆ ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.​ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಸುಮಾರು 300 ಕೋ. ರೂ. ವೆಚ್ಚದಲ್ಲಿ ಮಂದಿರ  ನಿರ್ಮಾಣವಾಗಲಿದೆ.  ಈ ಮೊತ್ತವನ್ನು ರಾಮ​ ​ಭಕ್ತರಿಂದಲೇ ಸಂಗ್ರಹಿಸಲು ಟ್ರಸ್ಟ್ ತೀರ್ಮಾನಿಸಿದೆ ಎಂದು ಟ್ರಸ್ಟ್‌ ವಿಶ್ವಸ್ಥ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

 

ಅದಕ್ಕಾಗಿ ಉತ್ತರ ಪ್ರದೇಶದ ಅಯೋಧ್ಯಾ ನಗರದ ನಯಾಘಾಟ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಟ್ರಸ್ಟ್ 2 ಬ್ಯಾಂಕ್ ಖಾತೆಗಳನ್ನು ತೆರೆದಿದೆ. ಭಕ್ತರು ನಗದು ಠೇವಣಿಯನ್ನು ಚಾಲ್ತಿ ಖಾತೆ ಸಂಖ್ಯೆ: 39161498809 ಹಾಗೂ ಚೆಕ್ ಠೇವಣಿ / ಆನ್ಲೈನ್ ವರ್ಗಾವಣೆಯನ್ನು ಉಳಿತಾಯ ಖಾತೆ ಸಂಖ್ಯೆ: 39161495808ಗೆ ಜಮೆ ಮಾಡಬಹುದು. ಐಎಫ್ಎಸ್ಸಿ ಕೋಡ್: ​SBIN0002510 .

ಆದಾಯ ತೆರಿಗೆಯಲ್ಲಿ ವಿನಾಯಿತಿ

ರಾಮ ಮಂದಿರಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಜಿ (2)(ಬಿ)  ತೆರಿಗೆ ವಿನಾಯಿ ನೀಡಲಾಗಿದೆ. ದೇಣಿಗೆ ಪಾವತಿಗೆ  2020-21ರ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆಯ ಶೇ. 50 ವಿನಾಯಿತಿ ಲಭಿಸುತ್ತದೆ.

 

ಒಬ್ಬರಿಗೆ 10 ರೂ., ಮನೆಯಿಂದ 101 ರೂ.

ಪ್ರತಿಯೊಬ್ಬ ಭಕ್ತನೂ ಕನಿಷ್ಠ 10 ರೂ. ಹಾಗೂ ಪ್ರತಿ ಮನೆಯಿಂದ 101 ರೂ. ದೇಣಿಗೆ ನೀಡಬೇಕು ಎಂದು ಈಚೆಗೆ ನಡೆದ ತೀರ್ಥ ಕ್ಷೇತ್ರ ಟ್ರಸ್ಟ್‌ ಸಭೆಯಲ್ಲಿ ಮನವಿ ಮಾಡಲಾಗಿದೆ. ಭಕ್ತರು ಶಕ್ತ್ಯಾನುಸಾರ ಅದಕ್ಕೂ ಹೆಚ್ಚಿನ ಮೊತ್ತ ನೀಡಬಹುದು. ಭಕ್ತರು ನೀಡುವ ಒಂದೊಂದು ರೂ. ಕೂಡಾ ರಾಮಮಂದಿರ ನಿರ್ಮಾಣಕ್ಕೆ ಬಳಕೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಟ್ರಸ್ಟ್ ದೇಣಿಗೆಯನ್ನು ಆನ್‌ಲೈನ್ ಮೂಲಕವೇ ಸಂಗ್ರಹಿಸಲು ನಿರ್ಧರಿಸಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಟ್ರಸ್ಟ್‌ನ ಅಧಿಕೃತ ವೆಬ್ಸೈಟ್ https://srjbtkshetra.org/ ನಿಂದ ಪಡೆಯಬಹುದು ಎಂದು ಎಂದು ಶ್ರೀಪಾದರು ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply