ಬಿಜಿಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ  ವರಮಹಾಲಕ್ಷ್ಮೀ ಆಚರಣೆ  

ಮಣಿಪಾಲದ ನೆಹರೂ ನಗರದ ಕೊರಗ ಕಾಲನಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸುಮಂಗಲಿಯರಿಗೆ ಭಾಗಿನ ಕೊಟ್ಟು, ವರಮಹಾಲಕ್ಷ್ಮೀ ಪೂಜೆಯ ಮಹತ್ವವನ್ನು ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದರು. ಸುಮಂಗಲಿಯರಿಗೆ ಅರಸಿನ, ಕುಂಕುಮ, ಬಳೆ, ರವಕೆ ಕಣ ಹಾಗು ಗೌರವ ಧನ ನೀಡಿ ಆರತಿ ಮಾಡಲಾಯಿತು

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಮಾತೃ ಘಟಕದ ಅಧ್ಯಕ್ಷರಾದ ಪೂರ್ಣಿಮಾ ಸುರೇಶ ನಾಯಕ್ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತ ಶೆಟ್ಟಿ, ಪ್ರಮೀಳಾ ಹರೀಶ್, ಉಪಾಧ್ಯಕ್ಷರಾದ ಸೋನಾ ಪಾಯಿದೆ, ಕಾರ್ಯದರ್ಶಿ ನಿರಜ ಶೆಟ್ಟಿ, ಸ್ಥಳೀಯ ನಗರ ಸಭಾ ಸದಸ್ಯರಾದ ವಿಜಯಲಕ್ಷ್ಮೀ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸರೋಜಾ ಶೆಟ್ಟಿಗಾರ್, ಕೋಶಾಧಿಕಾರಿ ರಜನಿ ಹೆಬ್ಬಾರ್, ತಾರ ಆಚಾರ್ಯ, ಸುಭೇದ, ಲೈಲಾ, ನಗರ ಬಿಜೆಪಿ ಕಾರ್ಯದರ್ಶಿ ದಯಶಿನಿ, ಲಕ್ಷ್ಮೀ ಶೆಟ್ಟಿ, ನಗರ ಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ್, ಜಿಲ್ಲಾ ಮಾಧ್ಯಮ ಪ್ರಕೋಷ್ಟದ ಶಿವಕುಮಾರ್ ಮತ್ತು ಇತರ ಕಾಲೋನಿಯ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply