- ಮಂಗಳೂರು: ಡಿ 1 : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿ ಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೋಳಾರದ ಶ್ರೀ ರಕ್ಷಾ ಎಂಬ ಮೀನುಗಾರಿಕಾ ಬೋಟ್ ಸೋಮವಾರ (ನ 30 ) ನಸುಕಿನ ಜಾವ ಮೀನುಗಾರಿಕೆಗೆ ತೆರಳಿತು. ನಿನ್ನೆ ರಾತ್ರಿಯೇ ಆಗಮಿಸ ಬೇಕಿದ್ದ ಈ ಬೋಟ್ ಅಪಘಾತಕ್ಕಿಡಾಗಿದೆ.
ದೋಣಿಯಲ್ಲಿ 20 ಕ್ಕೂ ಹೆಚ್ಚು ಮೀನು ಗಾರರಿದ್ದು,ದುರಂತದ ಸಂದರ್ಭ ದಲ್ಲಿ 14 ಮಂದಿ ಡಿಂಗಿಯಲ್ಲಿ ಕುಳಿತು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. 6 ಮಂದಿ ನಾಪತ್ತೆ ಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಧಾವಿಸಿದೆ.