“ವಿಶ್ವ ಆನೆ ದಿನ’ ಚಿತ್ರ ಬಿಡಿಸುವ ಸ್ಪರ್ಧೆಯ ಫಲಿತಾಂಶ

ಉಡುಪಿ: ‘ವಿಶ್ವ ಆ ನೆದಿನ’ದ ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತದ ವತಿಯಿಂದ ಪ್ರಕೃತಿಯಲ್ಲಿ ಆನೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ 15ವರ್ಷದ ಒಳಗಿನ ಮಕ್ಕಳಿಂದ ಆನೆಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಬುಧವಾರ ಏರ್ಪಡಿಸಲಾಗಿತ್ತು. ಪ್ರವೇಶಾರ್ಥಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನಿಸಲಾಗಿತ್ತು.

ಈ ಸ್ಪರ್ಧೆಗೆ ಒಟ್ಟು 1,496 ಚಿತ್ರಗಳು ಬಂದಿದ್ದು, ಅವುಗಳಲ್ಲಿ ಅಂತಿಮವಾಗಿ ಎರಡು ವರ್ಗಗಳಲ್ಲಿ ಆಯ್ಕೆ ಮಾಡಿ ಬಹುಮಾನವನ್ನು ನೀಡಲಾಯಿತು.
10ವರ್ಷದ ಒಳಗಿನವ ವಿಭಾಗದಲ್ಲಿ ಕಾರ್ಕಳದ ಸಾತ್ವಿಕ್ ಕೆ. ಆಚಾರ್ಯ (ಪ್ರಥಮ ), ಉಡುಪಿಯ ಧೃತಿ ಎಸ್. (ದ್ವಿತೀಯ ), ಪುತ್ತೂರಿನ ನಿಲಿಷ್ಕಾ ಕೆ. (ತೃತೀಯ ) ಬಹುಮಾನ ಪಡೆದಿದ್ದಾರೆ. ಅಲ್ಲದೇ 15 ವರ್ಷದ ಒಳಗಿನವರ ವಿಭಾಗದಲ್ಲಿ ಉಡುಪಿಯ ಕೆ. ಪ್ರತಿಷ್ಠಾ ಶೇಟ್ (ಪ್ರ), ಬ್ರಹ್ಮಾವರದ ಶರಣ್ಯ ಭಟ್ (ದ್ವಿ), ಮಂಗಳೂರಿನ ಮೋಕ್ಷಿತ್ ಸುರೇಶ್ ಮತ್ತು ಪುತ್ತೂರಿನ ಹಾಮಿದ (ತೃ) ಬಹುಮಾನ ಗಳಿಸಿದ್ದಾರೆ. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ಮತ್ತು ಸಹಕರಿಸಿದ ಪೋಷಕರಿಗೆ ಮಂಗಳೂರು ವೃತ್ತದ ಪರವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply