ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ವತಿಯಿಂದ ಶಾಸಕ ಸುನಿಲ್ ಕುಮಾರ್ ರವರಿಗೆ ಮನವಿ  

ಕಾರ್ಕಳ:ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ). ಇದರ ಕಾರ್ಕಳ ತಾಲೂಕು ಘಟಕವು ಶಾಸಕ ಸುನಿಲ್ ಕುಮಾರ್ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ್ ಕೆ ಇವರು ಕಳೆದ 8 ತಿಂಗಳುಗಳಿಂದ ಖಾಸಗಿ ಶಾಲಾ ಶಿಕ್ಷಕರು ಸರಿಯಾದ ವೇತನ ಇಲ್ಲದೆ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.

ಸರಕಾರದಿಂದ ಪರಿಹಾರ ದೊರಕಿಸಬೇಕು ಎಂದು ಹೇಳಿದರು.  ಕಾರ್ಕಳ ತಾಲೂಕು ಘಟಕದ ಅಧ್ಯಕ್ಷೆ ವಿಜೇತ ರಾಣಿ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಸರಕಾರವು ಹಲವಾರು ಕ್ಷೇತ್ರಗಳಿಗೆ ಸಹಾಯ ಮಾಡಿದೆ. ಖಾಸಗಿ ಶಿಕ್ಷಕರನ್ನು ಕೂಡ ಗೌರವದಿಂದ ಬದುಕಲು ಅನುವು ಮಾಡಬೇಕು ಎಂದು ಹೇಳಿದರು. ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಶಾಸಕರು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಉಡುಪಿ ಜಿಲ್ಲಾ ಖಜಾಂಚಿ ಗೌತಮ್, ಕಾರ್ಕಳ ತಾಲೂಕು ಕಾರ್ಯದರ್ಶಿ ನವೀನ್, ಶಿಕ್ಷಕರಾದ ಶ್ರೀ ಪ್ರಸಾದ್, ಸಂಧ್ಯಾ, ಸೌಮ್ಯ, ನಮಿತಾ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply