ಪೂರ್ಣಪ್ರಜ್ಞ ಇನ್ ಸ್ಟಿಟ್ಯೂಟ್ ಆಫ್ ಮಾನೇಜ್ಮೆಂಟ್ ನಲ್ಲಿ ಗ್ರಂಥಾಲಯ ಮಾಹಿತಿ ಕಾರ್ಯಾಗಾರ

ಉಡುಪಿ: ಪೂರ್ಣಪ್ರಜ್ಞ ಇನ್ ಸ್ಟಿಟ್ಯೂಟ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರಥಮ ವರ್ಷದ ಎಂ. ಬಿ.ಎ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಮಾಹಿತಿ ಕಾರ್ಯಾಗಾರ ನಡೆಯಿತು. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನವನ್ನು ಅಭಿವೃದ್ಧಿಗೊಳಿಸಬಹುದು ಎಂದು ಸಂಸ್ಥೆಯ ನಿರ್ದೇಶಕ ಡಾ. ಭರತ್ ವಿ. ಅವರು ಈ ಸಂದರ್ಭ ತಿಳಿಸಿದರು. 

 

ಗ್ರಂಥಪಾಲಕ ಪುರುಷೋತ್ತಮ ಅವರು ಗ್ರಂಥಾಲಯದಲ್ಲಿರುವ ಸಂಪನ್ಮೂಲ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ದ್ವಿತೀಯ ಎಂ. ಬಿ.ಎ ವಿದ್ಯಾರ್ಥಿಯರಾದ ಮುನ್ಝರಿನ್ ಕಾರ್ಯಕ್ರಮ ನಿರೂಪಿಸಿ, ದೀಪಕ್ ಶೆಟ್ಟಿ ವಂದಿಸಿದರು. ಗ್ರಂಥಾಲಯದ ಸಮಿತಿ ಸಂಯೋಜಕಿ ಪ್ರೋ. ಸುಜಾತ ಜಿ. ಎಲ್, ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕೇತರರು ಕಾರ್ಯಗಾರಾದಲ್ಲಿ ಉಪಸ್ಥಿತರಿದ್ದರು.

 

 

 

 

 
 
 
 
 
 
 
 
 
 
 

Leave a Reply