ಪಿಪಿಸಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಗಾರ

ಮಹಿಳೆ ಎಂದರೆ ಭೂಮಿ ತೂಕದ ಶಕ್ತಿ ಸಾಮರ್ಥ್ಯ ಹೊಂದಿದವಳು. ಮಹಿಳೆಯನ್ನು ದೇವತೆಗೆ ಹೋಲಿಸುವ ಸಂಸ್ಕೃತಿ ನಮ್ಮದಾದರೂ ಅವಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದನ್ನು ತಡೆಯಲು ಕಾನೂನಿನ ಸರಿಯಾದ ಅರಿವು ನಮಗಿರಬೇಕು. ಕಾನೂನನ್ನು ಜಾಗರೂಕತೆಯಿಂದ ಬಳಸಿಕೊಂಡು ಮಹಿಳೆಯು ಬದುಕಬೇಕು ಎಂದು ಹಿರಿಯ ಸಿವಿಲ್ ಜಡ್ಜ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲೆ, ಇಲ್ಲಿನ ಸದಸ್ಯ ಕಾರ‍್ಯದರ್ಶಿ ಆಗಿರುವ ಶರ್ಮಿಳಾ ಎಸ್.  ತಿಳಿಸಿದರು.

ಅವರು ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲ್ಪಟ್ಟ, ಕಾನೂನು ಅರಿವು ಕಾರ‍್ಯಕ್ರಮದಲ್ಲಿ ಅಭಿಪ್ರಾಯ ಪಟ್ಟರು. ಇನ್ನೋರ್ವ ಅತಿಥಿಗಳಾದ ಭಾನುಮತಿ, ಅಸಿಸ್ಟೆಂಟ್ ಲೀಗಲ್ ಎಡ್ ಡಿಫೆನ್ಸ್ ಕೌನ್ಸಿಲ್, ಅವರು ಪಾಲಕರು ನೀಡಿದ ಸ್ವಾತಂತ್ರ್ಯ ಹಾಗೂ ಸಂವಿಧಾನ ನೀಡಿದ ಹಕ್ಕುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

 ಅಧ್ಯಕ್ಷತೆ ವಹಿಸಿದ ಆಂಗ್ಲ ವಿಭಾಗದ ಮುಖ್ಯಸ್ಥರಾದ  ವಸಂತ ರವಿಪ್ರಕಾಶ್ ಅವರು ಮಹಿಳೆಯರಾಗಿ ನಾವು ಹೆಮ್ಮೆ ಪಡಬೇಕು ಹಾಗೂ ಕಾನೂನನ್ನು ಸರಿಯಾಗಿ ಹೇಗೆ ಬಳಸಿಕೊಳ್ಳಬೇಕು ಎಂದು ನಮಗೆ ಅರಿವಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಮಹಿಳಾ ಘಟಕದ ಸಂಯೋಜಕರಾದ ಅರ್ಚನಾ ಎಸ್. ಕಾರಂತ್ ಅತಿಥಿಗಳನ್ನು ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಹರ್ಷಿತಾ ಮತ್ತು ವೈಷ್ಣವಿ ಪ್ರಾರ್ಥಿಸಿದರು. ಮಹಿಳಾ ಘಟಕದ ಸಹ ಸಂಯೋಜಕರಾದ ಡಾ. ಭೈರವಿ ಪಾಂಡ್ಯ ವಂದಿಸಿದರು.  ಅನುಷಾ ಎಚ್ ನಿರೂಪಿಸಿದರು.
 
 
 
 
 
 
 
 
 
 
 

Leave a Reply