ಶ್ರೀ. ಎ.ಕೆ. ಸೋಮಯಾಜಿಯವರಿಗೆ ಪಿ.ಎಚ್.ಡಿ. ಪದವಿ ಪ್ರಧಾನ

ಉಡುಪಿ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದಲ್ಲಿ ಸಹವರ್ತಿ ಪ್ರಾಧ್ಯಾಪಕರಾಗಿರುವ ಶ್ರೀ ಅನಂತಕೃಷ್ಣ ಸೋಮಯಾಜಿಯವರಿಗೆ ಪಿ.ಎಚ್.ಡಿ. ಪದವಿ ದೊರೆತಿದೆ.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ ಅಲ್ಯುಮಿನಿಯಂ ನಾರುಗಳಿಂದ ಬಲಪಡಿಸಲ್ಪಟ್ಟ ಲೋಹ ಗರ್ಭಿಕೃತ ಸಮ್ಮಿಶ್ರ ವಸ್ತುವಿನ ಪ್ರಾಯೋಗಿಕ ಮತ್ತು  ಪರಿಮಿತ ಅಂಶಗಳ ಅಧ್ಯಯನ ಎನ್ನುವ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ದೊರೆತಿದೆ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ. ನರಸಿಂಹ ಮರಕಾಲರವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ನಡೆಸಿದ್ದರು.

 

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ “ಸೋಮಯಾಜಿ ಮನೆತನ”ದವರಾದ ಇವರು ಕುಂದಾಪುರ ತಾಲೂಕು ಕೊಡ್ಲಾಡಿ ಗ್ರಾಮದ ನಿವೃತ್ತ ಕನ್ನಡ ಪಂಡಿತ ಎಂ. ಮಹಾಬಲೇಶ್ವರ ಸೋಮಯಾಜಿ ಮತ್ತು ಶ್ರೀಮತಿ ವಾಗ್ದೇವಿಯವರ ಮಗ. ಪ್ರಸ್ತುತ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಕಾಸಾನುಗುಂದುವಿನಲ್ಲಿ ವಾಸವಿದ್ದಾರೆ.

 

 

 

 

 

 
 
 
 
 
 
 
 
 
 
 

Leave a Reply