ಕಲಾಸಂಸ್ಕೃತಿ ಮಹಿಳಾ ಯಕ್ಷ ಬಳಗ ಬೈಲೂರು ಇವರಿಂದ ಯಕ್ಷಗಾನ ತಾಳ ಮದ್ದಳೆ “ಜಾಂಬವತೀಕಲ್ಯಾಣ By Janardhan Kodavoor/Team karavalixpress, - January 11, 2024 ಉಡುಪಿ ಪುತ್ತಿಗೆ ಮಠದ ಶ್ರೀ ವಿಶ್ವ ಗೀತ ಪರ್ಯಾಯ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯಕ್ತ ರಥಬೀದಿಯ ಆನಂದ ತೀರ್ಥ ಮಂಟಪದಲ್ಲಿ ಮಹಿಳಾ ಯಕ್ಷ ಬಳಗ ಬೈಲೂರು ಇವರಿಂದ ಯಕ್ಷಗಾನ ತಾಳ ಮದ್ದಳೆ ಜಾಂಬವತೀಕಲ್ಯಾಣ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಕಾಶರಾವ್ ಕಟೀಲ್, ಮದ್ದಳೆಯಲ್ಲಿ ಮುರಲೀದರ ಭಟ್ ಕಟೀಲ್, ಚಂಡೆಯಲ್ಲಿ ಗಣೇಶ್ ಭಟ್ ರಾಯಿ ಸಹಕರಿಸಿದರು ಮುಮ್ಮೇಳದಲ್ಲಿ ಕೃಷ್ಣ- ಅಮಿತ ಕ್ರಮಧಾರಿ, ಸತ್ರಾಜಿತ- ಪದ್ಮಲತ ವಿಷ್ಣು , ಬಲರಾಮನಾಗಿ- ಜ್ಯೋತಿಲಕ್ಷ್ಮೀ , ಜಾಂಬವಂತನಾಗಿ- ಸುಮಿತ್ರಾ ಕೆರೆಮಠ ಮತ್ತು ನಾರದನಾಗಿ ರಮ್ಯಾಸ್ಕಂದ ಭಾಗವಹಿಸಿದ್ದರು. ಮುರಲೀಧರ ಭಟ್ ಕಟೀಲ್ ನಿರ್ದೇಶಿಸಿದರು.