ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಮಿತ್ರ ಸಂಗಮ (ರಿ) ಬಿಜಾಡಿ- ಗೂಪಾಡಿ, ರೋಟರಿ ಸಮುದಾಯ ದಳ ಬಿಜಾಡಿ-ಗೂಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 04/10/2020, ಭಾನುವಾರದಂದು ಬೆಳಿಗ್ಗೆ ಗಂಟೆ 10.30 ಕ್ಕೆ ದಿ.ನಾಗೇಶ್ವರ ಬಾಯರಿ ಅವರ ಮನೆ ಅಂಗಳದಲ್ಲಿ ಸೋಬಾನೆ ಹಬ್ಬ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಿದ್ಧ ರಂಗೋಲಿ ಕಲಾವಿದರು, ಕನ್ನಡ ಜಾನಪದ ಪರಿಷತ್ ಇದರ ವಿಭಾಗೀಯ ಸಂಚಾಲಕರಾದ ಡಾ.ಭಾರತಿ ಮರವಂತೆ ನೆರವೇರಿಸಲಿದ್ದಾರೆ. ವಾದಿರಾಜ್ ಹೆಬ್ಬಾರ್, ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಬಿಜಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಮೂರ್ತಿ ಶಂಕರನಾರಾಯಣ ಬಾಯರಿ(ನಾಗಪಾತ್ರಿ) ಬಿಜಾಡಿ, ಮಂಜುನಾಥ್ ,ಅಧ್ಯಕ್ಷರು ಮಿತ್ರ ಸಂಗಮ ಬೀಜಾಡಿ -ಗೋಪಾಡಿ, ಗಿರೀಶ್, ಅಧ್ಯಕ್ಷರು ರೋಟರಿ ಸಮುದಾಯ ದಳ ಬಿಜಾಡಿ- ಗೊಪಾಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದರುಗಳಾದ ಸೀತು ಕೋಟೆ ಬಾಗಿಲು, ಶಾರದಾ ಗಾಣಿಗ, ದುರ್ಗಿ ಕಂಬಳಗದ್ದೆಯವರಿಗೆ ಸನ್ಮಾನ ನಡೆಯಲಿದೆ. ಶ್ರೀಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮವು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಅವರ ಮಾರ್ಗದರ್ಶನದಲ್ಲಿ ಸಾಕಾರಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.