ದಾಸ ಶ್ರೇಷ್ಠ ಪುರಂದರ ದಾಸರು ನಾರದಂಶ ಸಂಭೂತರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅನೇಕ ದೇವರನಾಮಗಳು, ಉಗಾಭೋಗಗಳು, ಸುಳಾದಿಗಳನ್ನು ಬರೆದಿದ್ದಾರೆ. ಇವರನ್ನು “ಕರ್ನಾಟಕ ಸಂಗೀತದ ಪಿತಾಮಹ” ಎಂದು ಕರೆಯುತ್ತಾರೆ. ಸಣ್ಣ ಮಕ್ಕಳಿಗೆ ಸುಲಭವಾಗಿ ಸಂಗೀತವನ್ನು ಕಲಿಯಲು ಸರಳೆ ವರಸೆ, ಜಂಟಿವರಸೆ, ಅಲಂಕಾರಗಳು ,ಪಿಳ್ಳಾರಿ ಗೀತೆಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ಇರುವ ಡಾಂಭಿಕತನ, ಮೂಢನಂಬಿಕೆಯಿಂದ ಹಿಡಿದು ಆಧ್ಯಾತ್ಮದವರೆಗೆ ದೇವರ ನಾಮಗಳನ್ನು ಬರೆದಿದ್ದಾರೆ. ಇಂತಹ ದಾಸ ಶ್ರೇಷ್ಠರ ಅನೇಕ ಕೃತಿಗಳಲ್ಲಿ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಕೃತಿಗಳನ್ನು ಆರಿಸಿ ಕೊಂಡು “ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ” ಸಂಸ್ಥೆಯ ಸಂಸ್ಥಾಪಕರಾದ ಡಾ. ರಕ್ಷ ಕಾರ್ತಿಕ್ ರವರು ತಮ್ಮ ಶಿಷ್ಯೆಯರೊಂದಿಗೆ ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ.
ದಾಸ ವರೇಣ್ಯ ಪುರಂದರದಾಸರು \ ಶ್ರೀ ಶಿವ-ಶಕ್ತಿಯರ ನೃತ್ಯ ಪ್ರದರ್ಶನ
ದಾಸ ಶ್ರೇಷ್ಠ ಪುರಂದರ ದಾಸರು ನಾರದಂಶ ಸಂಭೂತರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅನೇಕ ದೇವರನಾಮಗಳು, ಉಗಾಭೋಗಗಳು, ಸುಳಾದಿಗಳನ್ನು ಬರೆದಿದ್ದಾರೆ. ಇವರನ್ನು “ಕರ್ನಾಟಕ ಸಂಗೀತದ ಪಿತಾಮಹ” ಎಂದು ಕರೆಯುತ್ತಾರೆ. ಸಣ್ಣ ಮಕ್ಕಳಿಗೆ ಸುಲಭವಾಗಿ ಸಂಗೀತವನ್ನು ಕಲಿಯಲು ಸರಳೆ ವರಸೆ, ಜಂಟಿವರಸೆ, ಅಲಂಕಾರಗಳು ,ಪಿಳ್ಳಾರಿ ಗೀತೆಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ಇರುವ ಡಾಂಭಿಕತನ, ಮೂಢನಂಬಿಕೆಯಿಂದ ಹಿಡಿದು ಆಧ್ಯಾತ್ಮದವರೆಗೆ ದೇವರ ನಾಮಗಳನ್ನು ಬರೆದಿದ್ದಾರೆ. ಇಂತಹ ದಾಸ ಶ್ರೇಷ್ಠರ ಅನೇಕ ಕೃತಿಗಳಲ್ಲಿ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಕೃತಿಗಳನ್ನು ಆರಿಸಿ ಕೊಂಡು “ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ” ಸಂಸ್ಥೆಯ ಸಂಸ್ಥಾಪಕರಾದ ಡಾ. ರಕ್ಷ ಕಾರ್ತಿಕ್ ರವರು ತಮ್ಮ ಶಿಷ್ಯೆಯರೊಂದಿಗೆ ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ.