ಡಾ.ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್(ರಿ),​ ​ಮಣಿಪಾಲ ಪ್ರಸ್ತುತ ಪಡಿಸುವ ‘ಪ್ರಮಾ ಪ್ರಶಸ್ತಿ 2020 ‘

ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,​ ​ಪರ್ಯಾಯ ಶ್ರೀ ಅದಮಾರು ಮಠ,​ ​ಶ್ರೀಕೃಷ್ಣ ಮಠದ ಆಶ್ರಯದಲ್ಲಿ,​ ​ಡಾ.ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್(ರಿ),​ ​ಮಣಿಪಾಲ ಪ್ರಸ್ತುತ ಪಡಿಸುವ ‘ಪ್ರಮಾ ಪ್ರಶಸ್ತಿ 2020 ‘ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು​ ಆಶೀರ್ವಚನ ನೀಡಿದರು.  ​​
ವೀಣೆಯನ್ನು ವಿವಿಧ ದೇವತಾಸ್ವರೂಪಗಳಾಗಿ ತಿಳಿದುಕೊಂಡು ಇದೂ ಒಂದು ದೇವರ ಪೂಜೆಯೆಂದು ಆರಾಧಿಸು ತ್ತಿರುವ ‘ಕಲಾಸ್ಪಂದನ’ದ ಸದಸ್ಯರು​ ಅಭಿನಂದನಾರ್ಹರು.  ​ತಮ್ಮ ಸಂಸ್ಥೆಯ ರಜತ​ ​ವರ್ಷಾಚರಣೆಯ ಸಂದರ್ಭ ದಲ್ಲಿ ​ಕಲಾಸೇವೆ ​ಮಾಡುತ್ತಿರುವುದು ದೇವರಿಗೆ  ಪ್ರೀತಿಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ  ಪ್ರತಿಭಾನ್ವಿತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.​ ​ಪುರಸ್ಕೃತರು  ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ 28 ವೀಣಾವಾದನ ಕಾರ್ಯಕ್ರಮ​ಸಂಪನ್ನಗೊಂಡಿತು.
          
 
 
 
 
 
 
 
 
 
 
 

Leave a Reply