ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ, ಡಾ.ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್(ರಿ), ಮಣಿಪಾಲ ಪ್ರಸ್ತುತ ಪಡಿಸುವ ‘ಪ್ರಮಾ ಪ್ರಶಸ್ತಿ 2020 ‘ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ವೀಣೆಯನ್ನು ವಿವಿಧ ದೇವತಾಸ್ವರೂಪಗಳಾಗಿ ತಿಳಿದುಕೊಂಡು ಇದೂ ಒಂದು ದೇವರ ಪೂಜೆಯೆಂದು ಆರಾಧಿಸು ತ್ತಿರುವ ‘ಕಲಾಸ್ಪಂದನ’ದ ಸದಸ್ಯರು ಅಭಿನಂದನಾರ್ಹರು. ತಮ್ಮ ಸಂಸ್ಥೆಯ ರಜತ ವರ್ಷಾಚರಣೆಯ ಸಂದರ್ಭ ದಲ್ಲಿ ಕಲಾಸೇವೆ ಮಾಡುತ್ತಿರುವುದು ದೇವರಿಗೆ ಪ್ರೀತಿಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪುರಸ್ಕೃತರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ 28 ವೀಣಾವಾದನ ಕಾರ್ಯಕ್ರಮಸಂಪನ್ನಗೊಂಡಿತು.